ಪೆರುವಾಯಿ: ಬಸ್ಸಿನಿಂದ ಹೊರಕ್ಕೆಸೆಯಲ್ಪಟ್ಟ ಪ್ರಯಾಣಿಕ ಗಂಭೀರ

0

ವಿಟ್ಲ: ಬಸ್ಸಿನಿಂದ ಹೊರಕ್ಕೆ ಎಸೆಯಲ್ಪಟ್ಟ ಪ್ರಯಾಣಿಕರೋರ್ವರು ಗಂಭೀರ ಗಾಯಗೊಂಡ ಘಟನೆ ಸೆ.15ರಂದು ಪೆರುವಾಯಿ ಗ್ರಾಮದ ಕೆದುವಾರು ಬಸ್ಸ್‌ ನಿಲ್ದಾಣದ ಬಳಿ ನಡೆದಿದೆ.

ಬಂಟ್ವಾಳ ತಾಲೂಕಿನ ಕೆದುವಾರು ದಿ. ಆದಂ ಡಿ ಸೋಜರವರ ಪುತ್ರ ಇನಾಸ್ ಡಿ ಸೋಜಾ (83 ವ.) ರವರು ಗಾಯಗೊಂಡವರಾಗಿದ್ದಾರೆ. ಇನಾಸ್ ಡಿಸೋಜರವರು ಆ.15ರಂದು ವಿಟ್ಲ ಪೇಟೆಗೆ ತೆರಳಿ ಬಳಿಕ ಪಕಳಕುಂಜ ಭಾಗಕ್ಕೆ ತೆರಳುವ ಸರಕಾರಿ ಬಸ್ಸಿನಲ್ಲಿ ಮರಳಿ ಮನೆ ಕಡೆ ಬರುತ್ತಿರುವ ವೇಳೆ ಕೆದುವಾರು ಬಸ್ಸ್‌ ನಿಲ್ದಾಣ ತಲುಪುತ್ತಿದ್ದಂತೆ ಅವರು ಬಸ್ಸಿನಿಂದ ಇಳಿಯಲು ಅನುವಾಗುತ್ತಿದ್ದಂತೆ ಬಸ್ಸಿನ ಹಿಂಬಾಗಿಲ ಮೂಲಕ ರಸ್ತೆಗೆಸೆಯಲ್ಪಟ್ಟಿದ್ದರು. ಗಂಭೀರ ಗಾಯಗೊಂಡಿದ್ದ ಅವರನ್ನು ಸ್ಥಳೀಯ ಆಸ್ಪತ್ರೆಗೆ ಕರೆತಂದು ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅಲ್ಲಿ ಅವರು ತೀವ್ರ ನಿಘಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಾಯಾಳುವಿನ ಪುತ್ರಿ ಪ್ರಮೀಳಾ ಡಿಸೋಜಾರವರು ನೀಡಿದ ದೂರಿನಂತೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here