ಕಡಬ ತಹಶೀಲ್ದಾರ್ ಅನಂತಶಂಕರ್ ಉಡುಪಿಗೆ ವರ್ಗಾವಣೆ; ಪುತ್ತೂರು ತಹಶೀಲ್ದಾರ್ ಆಗಿದ್ದ ರಮೇಶ್ ಬಾಬು ಕಡಬಕ್ಕೆ

0

ಪುತ್ತೂರು: ಪುತ್ತೂರಿನಲ್ಲಿ ಈ ಹಿಂದೆ ತಹಶೀಲ್ದಾರ್ ಆಗಿದ್ದ ಟಿ. ರಮೇಶ್ ಬಾಬುರವರನ್ನು ಕಡಬ ತಾಲೂಕಿಗೆ ವರ್ಗಾವಣೆಗೊಳಿಸಲಾಗಿದೆ. ಕಡಬ ತಹಶೀಲ್ದಾರ್ ಆಗಿದ್ದ ಅನಂತಶಂಕರ್ ಅವರನ್ನು ಉಡುಪಿ ಜಿಲ್ಲೆಯ ಜಿಲ್ಲಾಧಿಕಾರಿ ಕಛೇರಿಯ ಪುರಸಭಾ ತಹಶೀಲ್ದಾರ್ ಆಗಿ ವರ್ಗಾವಣೆ ಮಾಡಲಾಗಿದೆ.

                             ಅನಂತಶಂಕರ್                                      ರಮೇಶ್ ಬಾಬು

ಪುತ್ತೂರು ತಹಶೀಲ್ದಾರ್ ಆಗಿದ್ದ ಟಿ. ರಮೇಶ್ ಬಾಬುರವರನ್ನು ಪುತ್ತೂರಿನಿಂದ ವರ್ಗಾವಣೆಗೊಳಿಸಿ ಮಂಗಳೂರಿನಲ್ಲಿರುವ ದ.ಕ. ಜಿಲ್ಲಾಧಿಕಾರಿಯವರ ಕಛೇರಿಯಲ್ಲಿ ಶಿಷ್ಟಾಚಾರ ವಿಭಾಗದ ತಹಶೀಲ್ದಾರ್ ಆಗಿದ್ದ ನಿಸರ್ಗಪ್ರಿಯರವರನ್ನು ಪುತ್ತೂರುಗೆ ವರ್ಗಾವಣೆ ಮಾಡಲಾಗಿತ್ತು. ರಮಶ್ ಬಾಬುರವರಿಗೆ ಸ್ಥಳ ಕಾಣಿಸಿರಲಿಲ್ಲ. ಇದೀಗ ಅವರನ್ನು ಕಡಬ ತಾಲೂಕು ತಹಶೀಲ್ದಾರ್ ಆಗಿ ವರ್ಗಾವಣೆ ಮಾಡಲಾಗಿದೆ. ಪ್ರಸ್ತುತ ಕಡಬ ತಹಶೀಲ್ದಾರ್ ಆಗಿದ್ದ ಅನಂತ ಶಂಕರ್‌ರವರನ್ನು ಉಡುಪಿ ಜಿಲ್ಲಾಧಿಕಾರಿ ಕಛೇರಿಯ ಪುರಸಭಾ ತಹಶೀಲ್ದಾರ್ ಆಗಿ ವರ್ಗಾವಣೆ ಮಾಡಲಾಗಿದೆ. ಅನಂತ ಶಂಕರ್ ಅವರು ಈ ಹಿಂದೆ ಪುತ್ತೂರು ತಹಶೀಲ್ದಾರ್ ಆಗಿ ಕಾರ್ಯ ನಿರ್ವಹಿಸಿದ್ದರು.

LEAVE A REPLY

Please enter your comment!
Please enter your name here