ನೆಲ್ಯಾಡಿ ಕಾಮಧೇನು ಮಹಿಳಾ ಸಹಕಾರ ಸಂಘ: ಅಧ್ಯಕ್ಷೆ; ಉಷಾ ಅಂಚನ್, ಉಪಾಧ್ಯಕ್ಷೆ: ಮೇಘನಾಶೈನ್

0

ನೆಲ್ಯಾಡಿ: ಹೊಸದಾಗಿ ನೋಂದಣಿಯಾಗಿರುವ ಕಡಬ ತಾಲೂಕಿನ ಪ್ರಥಮ ಮಹಿಳಾ ಸಹಕಾರ ಸಂಘ ಆಗಿರುವ ಕಾಮಧೇನು ಮಹಿಳಾ ಸಹಕಾರ ಸಂಘ ನೆಲ್ಯಾಡಿ ಇದರ ಮುಂದಿನ 5 ವರ್ಷಗಳ ಅವಧಿಗೆ ನೂತನ ಅಧ್ಯಕ್ಷೆಯಾಗಿ ತಾ.ಪಂ.ಮಾಜಿ ಸದಸ್ಯೆ ಉಷಾ ಅಂಚನ್ ಹಾಗೂ ಉಪಾಧ್ಯಕ್ಷೆಯಾಗಿ ನೆಲ್ಯಾಡಿಯ ಮೇಘನಾಶೈನ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಸೆ.20ರಂದು ನೆಲ್ಯಾಡಿಯಲ್ಲಿರುವ ಸಂಘದ ಕಚೇರಿಯಲ್ಲಿ ನಡೆದ ನಿರ್ದೇಶಕರ ಸಭೆಯಲ್ಲಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಿತು. ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿ, ಪುತ್ತೂರು ಉಪವಿಭಾಗ, ಪುತ್ತೂರು ಇಲ್ಲಿನ ಮಾರಾಟಾಽಕಾರಿಯಾಗಿರುವ ಶೋಭಾ ಎನ್.ಎಸ್.ರವರು ಚುನಾವಣಾಽಕಾರಿಯಾಗಿದ್ದರು. ಸಂಘದ ನಿರ್ದೇಶಕರು ಸಭೆಯಲ್ಲಿ ಉಪಸ್ಥಿತರಿದ್ದರು.

ನಿರ್ದೇಶಕರ ಅವಿರೋಧ ಆಯ್ಕೆ: 12 ಸದಸ್ಯ ಬಲದ ಸಂಘದ ಆಡಳಿತ ಮಂಡಳಿಗೆ ಸೆ.17ರಂದು ನಿರ್ದೇಶಕರ ಆಯ್ಕೆ ಪ್ರಕ್ರಿಯೆ ನಡೆದಿದ್ದು 12 ಸ್ಥಾನಕ್ಕೂ ಅವಿರೋಧ ಆಯ್ಕೆ ನಡೆದಿದೆ. ನಿರ್ದೇಶಕರಾಗಿ ತಾ.ಪಂ.ಮಾಜಿ ಸದಸ್ಯೆ ಉಷಾ ಅಂಚನ್, ನೆಲ್ಯಾಡಿಯ ಮೇಘನಾಶೈನ್, ಕೊಣಾಜೆ ಗ್ರಾ.ಪಂ.ಸದಸ್ಯೆ ಮೈತ್ರಿ ಪುತ್ತಿಗೆ, ರತಿ ಡಿ.ಶಾಂತಿನಗರ, ನೆಲ್ಯಾಡಿ ಗ್ರಾ.ಪಂ.ಸದಸ್ಯೆ ಶ್ರೀಲತಾ ಸಿ.ಹೆಚ್. ಮಾದೇರಿ, ಶಿರಾಡಿ ಗ್ರಾ.ಪಂ.ಅಧ್ಯಕ್ಷೆ ವಿನೀತಾತಂಗಚ್ಚನ್, ಜಯಂತಿ ಬಿ.ನಾಯ್ಕ್ ಅಲಂಗಪೆ ಆಲಂತಾಯ, ಕೊಲ್ಯೊಟ್ಟು ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಸಂಪಾವತಿ ಪಟ್ಟೆಜಾಲು, ಗೋಳಿತ್ತೊಟ್ಟು ಗ್ರಾ.ಪಂ.ಮಾಜಿ ಅಧ್ಯಕ್ಷೆ ಶಾಲಿನಿಶೇಖರ ಪೂಜಾರಿ, ಗೋಳಿತ್ತೊಟ್ಟು ಗ್ರಾ.ಪಂ.ಸದಸ್ಯೆ ವಾರಿಜಾಕ್ಷಿ ಹೊಸಮನೆ ಕೊಣಾಲು, ಕೌಕ್ರಾಡಿ ಗ್ರಾ.ಪಂ.ಸದಸ್ಯೆ ಡೈಸಿವರ್ಗೀಸ್ ಇಚ್ಲಂಪಾಡಿ, ಪ್ರವೀಣಿಸುಧಾಕರ ಗೌರಿಜಾಲು ಅವಿರೋಧವಾಗಿ ಆಯ್ಕೆಗೊಂಡಿದ್ದರು. ಸೆ.20ರಂದು ನಡೆದ ಸಂಘದ ಆಡಳಿತ ಮಂಡಳಿಯ ಮೊದಲ ಸಭೆಯಲ್ಲಿ ಸಂಘದ ಅಧ್ಯಕ್ಷೆಯಾಗಿ ಉಷಾ ಅಂಚನ್ ಹಾಗೂ ಉಪಾಧ್ಯಕ್ಷೆಯಾಗಿ ಮೇಘನಾಶೈನ್‌ರವರನ್ನು ಆಯ್ಕೆ ಮಾಡಲಾಯಿತು.

ಅಭಿನಂದನೆ: ನೂತನ ಅಧ್ಯಕ್ಷೆಯಾಗಿ ಆಯ್ಕೆಗೊಂಡಿರುವ ಉಷಾ ಅಂಚನ್ ಹಾಗೂ ಉಪಾಧ್ಯಕ್ಷೆಯಾಗಿ ಆಯ್ಕೆಗೊಂಡ ಮೇಘನಾಶೈನ್‌ರವರಿಗೆ ಸಭೆಯಲ್ಲಿ ಅಭಿನಂದನೆ ಸಲ್ಲಿಸಲಾಯಿತು. ಸಂಘದ ಸಲಹಾ ಸಮಿತಿ ಸದಸ್ಯರಾದ ಜನಾರ್ದನ ಬಾಣಜಾಲು, ಬಾಬು ಪೂಜಾರಿ ಕಿನ್ಯಡ್ಕ, ಕಲಾವತಿ ರೈ ತೋಟ, ಲಲಿತಾ ನೆಲ್ಯಾಡಿ ಹಾಗೂ ನಿರ್ದೇಶಕರು ನೂತನ ಅಧ್ಯಕ್ಷ, ಉಪಾಧ್ಯಕ್ಷರಿಗೆ ಅಭಿನಂದನೆ ಸಲ್ಲಿಸಿದರು. ನೂತನ ಅಧ್ಯಕ್ಷೆ ಉಷಾ ಅಂಚನ್‌ರವರು ಮಾತನಾಡಿ, ಸಂಘದ ಅಭಿವೃದ್ಧಿಗೆ ಎಲ್ಲರೂ ಸಹಕಾರ ನೀಡುವಂತೆ ಹೇಳಿದರು. ಸಿಬ್ಬಂದಿಗಳಾದ ಚೈತನ್ಯ ಹೆಚ್., ಸ್ವಾತಿ ವಿನಯ್ ಸಹಕರಿಸಿದರು


ಉಷಾ ಅಂಚನ್ ಪ್ರಥಮ ಅಧ್ಯಕ್ಷೆ:

ಕಾಮಧೇನು ಮಹಿಳಾ ಸಹಕಾರ ಸಂಘ ನೆಲ್ಯಾಡಿ ಇದರ ಪ್ರಥಮ ಅಧ್ಯಕ್ಷೆಯಾಗಿ ಅವಿರೋಧವಾಗಿ ಆಯ್ಕೆಯಾಗಿರುವ ಉಷಾ ಅಂಚನ್‌ರವರು ತಾ.ಪಂ.ನ ಮಾಜಿ ಸದಸ್ಯೆಯಾಗಿದ್ದಾರೆ. ಉಷಾ ಅಂಚನ್‌ರವರು ಕೊಣಾಲು ಆರ್ಲ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಸ್ಥಾಪಕಾಧ್ಯಕ್ಷೆಯಾಗಿ, ಬಳಿಕ ೨ನೇ ಬಾರಿಗೆ ಅಧ್ಯಕ್ಷೆಯಾಗಿ, ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾಗಿ, ಪುತ್ತೂರು ಪ್ರಿಯದರ್ಶಿನಿ ಮಹಿಳಾ ಸಹಕಾರ ಸಂಘದ ನಿರ್ದೇಶಕರಾಗಿ, ಜಿಲ್ಲಾ ಮೂರ್ತೆದಾರರ ಮಹಾಮಂಡಲದಲ್ಲಿ ೨ನೇ ಬಾರಿಗೆ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪುತ್ತೂರು ಬ್ರಹ್ಮಶ್ರೀ ವಿವಿಧೋದ್ದೇಶ ಸಹಕಾರ ಸಂಘದ ಮಾಜಿ ನಿರ್ದೇಶಕರಾಗಿದ್ದು ಉಪ್ಪಿನಂಗಡಿ ಮೂರ್ತೆದಾರರ ಸೇವಾ ಸಹಕಾರಿ ಸಂಘದಲ್ಲಿ ೫ ವರ್ಷ ನಿರ್ದೇಶಕರಾಗಿ, ಬಳಿಕದ ಅವಽಯಲ್ಲಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ. ಉಪಾಧ್ಯಕ್ಷೆಯಾಗಿ ಆಯ್ಕೆಗೊಂಡಿರುವ ಮೇಘನಾಶೈನ್‌ರವರು ನೆಲ್ಯಾಡಿ ನಿವಾಸಿಯಾಗಿದ್ದು ವಿವಿಧ ಸಂಘ ಸಂಸ್ಥೆಗಳಲ್ಲಿ ಗುರುತಿಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here