ಉಪ್ಪಿನಂಗಡಿ: ಸ್ನೇಕ್ ಝಕರಿಯಾ ಕಾರ್ಯಾಚರಣೆ- ಅಂಗಡಿಯೊಳಗಿದ್ದ ನಾಗರ ಹಾವು ಕಾಡಿಗೆ

0

ಉಪ್ಪಿನಂಗಡಿ :ವ್ಯಾಪಾರ ಸ್ಥಳದಲ್ಲಿ ಕಾಣಿಸಿಕೊಂಡ ನಾಗರ ಹಾವೊಂದನ್ನು ಉರಗ ಪ್ರೇಮಿ ಸ್ನೇಕ್ ಝಕಾರಿಯಾ ಹಿಡಿದು ಕಾಡಿಗೆ ಬಿಟ್ಟ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ.
ಇಲ್ಲಿನ ಬ್ಯಾಂಕ್ ರಸ್ತೆಯ ದಿನಸಿ ಅಂಗಡಿಯೊಂದರ ಬಳಿ ಕಾಣಿಸಿಕೊಂಡ ಸಾಮಾನ್ಯ ಗಾತ್ರದ ನಾಗರ ಹಾವೊಂದು ಬಳಿಕ ಅಂಗಡಿಯೊಂದರ ಒಳಗೆ ಅಡಗಿ ಕುಳಿತಿತ್ತು. ಇದರಿಂದಾಗಿ ಭಯಭೀತರಾದ ವ್ಯಾಪಾರಸ್ಥರು ಹಾವನ್ನು ಹಿಡಿಯಲು ಸ್ನೇಕ್ ಝಕಾರಿಯಾರವರ ಸಹಾಯ ಯಾಚಿಸಿದರು.

ಕೂಡಲೇ ಧಾವಿಸಿ ಬಂದ ಝಕಾರಿಯಾರವರು ಅವಿತ್ತಿದ್ದ ಹಾವನ್ನು ಹೊರಗೆಳೆದು ಪ್ಲ್ಯಾಸ್ಟಿಕ್ ಬಾಟ್ಲಿಯಲ್ಲಿ ತುಂಬಿಸಿ ಕಾಡಿಗೆ ಬಿಟ್ಟರು.

LEAVE A REPLY

Please enter your comment!
Please enter your name here