ವೃತ್ತ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ದ್ವಿತೀಯ ಸಮಗ್ರ ಪ್ರಶಸ್ತಿಯೊಂದಿಗೆ ವಿವೇಕಾನಂದ ಆಂಗ್ಲಮಾಧ್ಯಮ ಶಾಲೆ ತಾಲೂಕುಮಟ್ಟಕ್ಕೆ ಆಯ್ಕೆ

0

ಪುತ್ತೂರು: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಛೇರಿ, ಕ್ಷೇತ್ರ ಸಂಪನ್ಮೂಲ ಕೇಂದ್ರ, ಪುತ್ತೂರು ಇವರ ವತಿಯಿಂದ ಸುಬೋಧ ಪ್ರೌಢ ಶಾಲೆ, ಪಾಣಾಜೆ ಇಲ್ಲಿ ನಡೆದ ಪುತ್ತೂರು ವೃತ್ತ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯ 10ನೇ ತರಗತಿಯ ಆಂಗಿಕಾಶೆಟ್ಟಿ  (ರಾಜ್ಕುಮಾರ್ಶೆಟ್ಟಿ, ಸ್ವಸ್ತಿಕಾ. ಆರ್.ಶೆಟ್ಟಿದಂಪತಿಪುತ್ರಿ) ಭರತನಾಟ್ಯದಲ್ಲಿ ಪ್ರಥಮ,  10ನೇತರಗತಿಯ ತನ್ವಿ ಶೆಣೈ ( ವಿಶ್ವಾಸ್ಶೆಣೈ, ಶಾಂತೇರಿಶೆಣೈದಂಪತಿಪುತ್ರಿ)  ಇಂಗ್ಲಿಷ್ ಭಾಷಣದಲ್ಲಿ ಪ್ರಥಮ, 10ನೇತರಗತಿಯ ಸಾನ್ವಿಕಜೆ (ಡಾ. ಚರಣ್ಕಜೆ, ಡಾ.ರಮ್ಯಾಕಜೆದಂಪತಿಪುತ್ರಿ) ಗಝಲ್ ನಲ್ಲಿ ಪ್ರಥಮ, 10ನೇ ತರಗತಿಯ ಶರಣ್  (ಸೀತಾರಾಮರೈ, ಸವಿತಾರೈದಂಪತಿಪುತ್ರ) ಹಾಸ್ಯದಲ್ಲಿ ಪ್ರಥಮ, 10ನೇ ತರಗತಿಯ ಧನುಷ್ ರಾಮ್(ದಿನೇಶ್ ಪ್ರಸನ್ನ , ಉಮಾ.ಡಿ. ಪ್ರಸನ್ನ ದಂಪತಿ ಪುತ್ರ) ಮತ್ತು ಹಿಮಾನಿ (ಚಿದಾನಂದ, ಶೋಭಾ ದಂಪತಿ ಪುತ್ರಿ) ಇವರ ತಂಡ ರಸ ಪ್ರಶ್ನೆಯಲ್ಲಿ ಪ್ರಥಮ, 9ನೇ ತರಗತಿಯ ಅಮೋಘಕೃಷ್ಣ (ಬಾಲಕೃಷ್ಣಭಟ್, ಸುಮಿತ್ರಾ ಭಟ್‌ ದಂಪತಿ ಪುತ್ರ) ಜನಪದಗೀತೆಯಲ್ಲಿ ಪ್ರಥಮ, 10ನೇ ತರಗತಿಯ ಅರ್ಚನಾಕಿಣಿ (ಹರೀಶ್ಕಿಣಿ, ವಿನಯಾಕಿಣಿ ದಂಪತಿ ಪುತ್ರಿ) ಸಂಸ್ಕೃತಭಾಷಣದಲ್ಲಿ ದ್ವಿತೀಯ, 10ನೇತರಗತಿಯ ಪೂರ್ವಿರೈ (ಅರುಣ್ಪ್ರಕಾಶ್ರೈ, ಸವಿತಾರೈದಂಪತಿಪುತ್ರಿ)  ಕನ್ನಡಭಾಷಣದಲ್ಲಿದ್ವಿತೀಯ,  10ನೇತರಗತಿಯ ತೇಜ ಚಿನ್ಮಯಹೊಳ್ಳ (ಹರೀಶ್ಹೊಳ್ಳ, ಸುಚಿತ್ರಾ ಹೊಳ್ಳ ದಂಪತಿಪುತ್ರ)ಭಾವಗೀತೆಯಲ್ಲಿ ದ್ವಿತೀಯ, 10ನೇ ತರಗತಿಯ ಧಾತ್ರಿ (ದಿನೇಶ್, ಪದ್ಮಲಕ್ಷ್ಮೀದಂಪತಿಪುತ್ರಿ) ಸಾಮಾನ್ಯ ಕನ್ನಡ ಭಾಷಣದಲ್ಲಿ ದ್ವಿತೀಯ ಬಹುಮಾನ ಪಡೆದುಕೊಂಡು ತಾಲೂಕು ಮಟ್ಟದ ಪ್ರತಿಭಾಕಾರಂಜಿ ಸ್ಪರ್ಧೆಗಳಿಗೆ ಆಯ್ಕೆಯಾಗಿರುತ್ತಾರೆ. ಮಾತ್ರವಲ್ಲದೇ, ಶಾಲಾ ತಂಡ ದ್ವಿತೀಯ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿದೆ ಎಂದು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಮುಖ್ಯೋಪಾಧ್ಯಾಯರಾದ ಸತೀಶ್ ಕುಮಾರ್‌ ರೈ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

 

LEAVE A REPLY

Please enter your comment!
Please enter your name here