ಬಿಳಿನೆಲೆ ಗ್ರಾಮ ಪಂಚಾಯತ್ ಜಮಾಬಂಧಿ ಸಭೆ

0

ಕಡಬ: ಬಿಳಿನೆಲೆ ಗ್ರಾಮ ಪಂಚಾಯತ್ 2021-22ನೇ ಸಾಲಿನ ಜಮಾಬಂಧಿ ಸಭೆ ಸೆ.21ರಂದು ಗ್ರಾ.ಪಂ ಅಧ್ಯಕ್ಷ ಶಿವಶಂಕರ್ ಕೆ ಅಧ್ಯಕ್ಷತೆಯಲ್ಲಿ ಗ್ರಾ.ಪಂ ಸಭಾಭವನದಲ್ಲಿ ನಡೆಯಿತು. ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರಾದ ಯಶಸ್ ಮಂಜುನಾಥ್ ಜಮಾಬಂಧಿ ಅಧಿಕಾರಿಯಾಗಿದ್ದರು. ಕೃಷಿ ಇಲಾಖೆಯ ಅಧೀಕ್ಷಕ ಕೃಷ್ಣ ಪ್ರಸಾದ್ ಭಂಡಾರಿ, ಪಿಆರ್‌ಇಡಿ ಕಿರಿಯ ಇಂಜಿನಿಯರ್ ಹುಕ್ಕೇರಿ, ಬಿಳಿನೆಲೆ ಗ್ರಾ.ಪಂ ಉಪಾಧ್ಯಕ್ಷೆ ಶಾರದಾ ದಿನೇಶ್, ಸದಸ್ಯರಾದ ಸತೀಶ್ ಕಳಿಗೆ, ಸುಧೀರ್ ಕುಮಾರ್ ಶೆಟ್ಟಿ, ಬೇಬಿ, ಭವ್ಯ, ಗ್ರಾ.ಪಂ ಪಿಡಿಓ ಸುಜಾತ ಕೆ, ಕಾರ್ಯದರ್ಶಿ ಶೀನ ಉಪಸ್ಥಿತರಿದ್ದರು. ಸಭೆಯಲ್ಲಿ ಗ್ರಾ.ಪಂ ಲೆಕ್ಕಪತ್ರಗಳ ದಾಖಲೆ ಮತ್ತು 2021-22ನೇ ಸಾಲಿನಲ್ಲಿ ನಿರ್ವಹಿಸಿದ ಕಾಮಗಾರಿಗಳ ತಪಾಸಣೆ ನಡೆಯಿತು. ಗ್ರಾ.ಪಂ ಸಿಬ್ಬಂದಿಗಳು ಸಹಕರಿಸಿದರು.

LEAVE A REPLY

Please enter your comment!
Please enter your name here