ಉಮ್ರಾ ಯಾತ್ರೆಗೆ ತೆರಳಲಿರುವ ಇಬ್ರಾಹಿಂರವರಿಗೆ ಅಮ್ಚಿನಡ್ಕ ಮಸೀದಿಯಲ್ಲಿ ಬೀಳ್ಕೊಡುಗೆ ಕಾರ್ಯಕ್ರಮ

0

ಪುತ್ತೂರು: ಉಮ್ರಾ ಯಾತ್ರೆಗೆ ತೆರಳಲಿರುವ ಅಮ್ಚಿನಡ್ಕದ ಮುಖಾರಿಮೂಲೆ ನಿವಾಸಿ ಇಬ್ರಾಹಿಂರವರಿಗೆ ಅಮ್ಚಿನಡ್ಕ ಬದ್ರಿಯಾ ಜುಮಾ ಮಸೀದಿಯಲ್ಲಿ ಜಮಾಅತ್ ಕಮಿಟಿ ವತಿಯಿಂದ ಬೀಳ್ಕೊಡುಗೆ ಕಾರ್ಯಕ್ರಮ ಸೆ.೨೧ರಂದು ನಡೆಯಿತು. ತನ್ನ ಪತ್ನಿ ಜೊತೆ ಪವಿತ್ರ ಉಮ್ರಾ ಯಾತ್ರೆ ಮಾಡಲಿರುವ ಇಬ್ರಾಹಿಂ ಅವರನ್ನು ಶಾಲು ಹೊದಿಸಿ ಗೌರವಿಸಿ ಬೀಳ್ಕೊಡಲಾಯಿತು. ಸ್ಥಳೀಯ ಖತೀಬ್ ಅಬ್ದುಸ್ಸಲಾಂ ಫೈಝಿ ದುವಾ ನೆರವೇರಿಸಿದರು.

ಜಮಾಅತ್ ಅಧ್ಯಕ್ಷ ಸಿ.ಎ ಖಾದರ್ ಅಧ್ಯಕ್ಷತೆ ವಹಿಸಿದ್ದರು. ಜಮಾಅತ್ ಕಮಿಟಿ ಕಾರ್ಯದರ್ಶಿ ಕೆ.ಕೆ ಅಬ್ದುಲ್ ಖಾದರ್, ಕೋಶಾಧಿಕಾರಿ ಯೂಸುಫ್ ಹಾಜಿ, ಸಮಿತಿ ಸದಸ್ಯರಾದ ಹಸೈನಾರ್, ಹಮೀದ್, ಹಸೈನಾರ್ ಮುಖಾರಿಮೂಲೆ, ಇಬ್ರಾಹಿಂ, ಯೂಸುಫ್ ಹಾಜಿ, ಇಬ್ರಾಹಿಂ ಬಾತಿಷ ಝುಹ್ರಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here