ಕೊಣಾಲು ನಿವಾಸಿ ವಿಶ್ವನಾಥ ಗೌಡ ಹೃದಯಾಘಾತದಿಂದ ನಿಧನ

0

ನೆಲ್ಯಾಡಿ: ಕಡಬ ತಾಲೂಕಿನ ಕೊಣಾಲು ಗ್ರಾಮದ ಶಾಂತಿಮಾರು ದಿ.ಬಾಲಪ್ಪ ಗೌಡರ ಪುತ್ರ ವಿಶ್ವನಾಥ ಯಾನೆ ವಾಸು(46ವ.)ರವರು ಹೃದಯಾಘಾತದಿಂದ ಸೆ.22ರಂದು ನಿಧನರಾದರು.

ಕೃಷಿಕರಾಗಿದ್ದ ವಿಶ್ವನಾಥರವರು ಬೆಳಿಗ್ಗೆ ಪತ್ನಿ ಜೊತೆ ಸೊಪ್ಪು ತರಲೆಂದು ಗುಡ್ಡಕ್ಕೆ ಹೋದವರಿಗೆ ಎದೆನೋವು ಕಾಣಿಸಿಕೊಂಡಿತ್ತು. ಮನೆಗೆ ಬಂದವರು ಎದೆನೋವಿನಿಂದ ತೀವ್ರ ಅಸ್ವಸ್ಥಗೊಂಡಿದ್ದು ಮನೆಯವರು ತಕ್ಷಣ ನೆಲ್ಯಾಡಿಯ ಅಶ್ವಿನಿ ಆಸ್ಪತ್ರೆಗೆ ಕರೆತಂದರು. ಆದರೆ ಆ ವೇಳೆಗಾಗಲೇ ವಿಶ್ವನಾಥ ಗೌಡರವರು ಹೃದಯಾಘಾತದಿಂದ ಮೃತಪಟ್ಟಿದ್ದರು ಎಂದು ವರದಿಯಾಗಿದೆ. ಮೃತರು ತಾಯಿ ಯಮುನಾ, ಪತ್ನಿ ಪ್ರೇಮಲತಾ, ಪುತ್ರಿ ತೇಜಸ್ವಿ ಹಾಗೂ ಪುತ್ರ ಚಿಂತನ್ ಅವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here