ಕೌಡಿಚ್ಚಾರು ಶ್ರೀಕೃಷ್ಣ ಭಜನಾ ಮಂದಿರದ ಜೀರ್ಣೋದ್ದಾರಕ್ಕೆ ಮಜ್ಜಾರಡ್ಕ ಶ್ರೀವಿಷ್ಣು ಯುವಶಕ್ತಿ ಬಳಗದಿಂದ ದೇಣಿಗೆ

0

ಪುತ್ತೂರು : ಅರಿಯಡ್ಕ ಗ್ರಾಮದ ಕೌಡಿಚ್ಚಾರು ಶ್ರೀಕೃಷ್ಣ ಭಜನಾ ಮಂದಿರದ ಜೀರ್ಣೋದ್ದಾರ ಕಾಮಗಾರಿಗೆ ಜಿಲ್ಲಾ ಪ್ರಶಸ್ತಿ ಪುರಸ್ಕೃತ ಮಜ್ಜಾರಡ್ಕ ಶ್ರೀವಿಷ್ಣು ಯುವಶಕ್ತಿ ಬಳಗದ ವತಿಯಿಂದ ರೂ. ೩೦,೦೦೦ ದೇಣಿಗೆಯನ್ನು ನೀಡಲಾಯಿತು. ಭಜನಾ ಮಂದಿರದ ಪದಾಧಿಕಾರಿಗಳಿಗೆ ದೇಣಿಗೆ ಹಸ್ತಾಂತರ ಮಾಡಿದರು.


 

ಭಜನಾ ಮಂದಿರದ ಜೀರ್ಣೋದ್ದಾರ ಸಮಿತಿ ಪ್ರಧಾನ ಕಾರ್ಯದರ್ಶಿ ಲೋಕೇಶ್ ರೈ ಅಮೈ, ಆಡಳಿತ ಮಂಡಳಿ ಪ್ರಧಾನ ಕಾರ್ಯದರ್ಶಿ ದುರ್ಗಾ ಪ್ರಸಾದ್ ಕುತ್ಯಾಡಿ, ಕಾರ್ಯದರ್ಶಿ ದೀಪಕ್ ಕುಲಾಲ್ ಆಕಾಯಿ, ಉಪಾಧ್ಯಕ್ಷರಾದ ಸಚಿನ್ ಪಾಪೆಮಜಲು ಮತ್ತು ಕುಂಞಿರಾಮ ಮಣಿಯಾಣಿ ಕುತ್ಯಾಡಿ, ಭಜನಾ ಸಂಕೀರ್ತನೆ ಸಮಿತಿ ಗೌರವಾಧ್ಯಕ್ಷ ಸದಾಶಿವ ಮಣಿಯಾಣಿ ಕುತ್ಯಾಡಿ, ಕೋಶಾಧಿಕಾರಿ ತಿಲಕ್ ರೈ ಕುತ್ಯಾಡಿ, ಸದಸ್ಯರಾದ ಪ್ರವೀಣ್ ಕರ್ಕೆರ ಮಡ್ಯಂಗಳ, ದುರ್ಗಾ ಪ್ರಸಾದ್ ಮುಂಗ್ಲಿಮೂಲೆ, ವಸಂತ್ ಕುಲಾಲ್ ಆಕಾಯಿ, ಉದಯ್ ಆಕಾಯಿ, ಶ್ರೀವಿಷ್ಣು ಯುವ ಶಕ್ತಿ ಬಳಗದ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here