ಆತೂರು: ಸ್ಕೂಟರ್, ಬೈಕ್ ಡಿಕ್ಕಿ-ಓರ್ವನಿಗೆ ಗಂಭೀರ ಗಾಯ

0

ರಾಮಕುಂಜ: ಬೈಕ್ ಹಾಗೂ ಸ್ಕೂಟರ್ ನಡುವೆ ಡಿಕ್ಕಿ ಸಂಭವಿಸಿ ಬೈಕ್ ಸವಾರ ಗಂಭೀರ ಗಾಯಗೊಂಡಿರುವ ಘಟನೆ ಉಪ್ಪಿನಂಗಡಿ-ಕಡಬ ರಾಜ್ಯ ಹೆದ್ದಾರಿಯ ಆತೂರಿನಲ್ಲಿ ಸೆ.29ರಂದು ಸಂಜೆ ನಡೆದಿದೆ.

ಮೂಲತ: ಮಾರನಹಳ್ಳಿ ನಿವಾಸಿಯಾಗಿದ್ದು ನೆಲ್ಯಾಡಿಯಲ್ಲಿ ವಾಸವಾಗಿರುವ ಜಾನ್ ಎಂಬವರು ಸಬಳೂರಿನಲ್ಲಿ ಕೆಲಸ ಮುಗಿಸಿ ತನ್ನ ಸ್ಕೂಟರ್(ಕೆಎ 21 ಇಎ 7796)ನಲ್ಲಿ ಗೋಳಿತ್ತಡಿ ಮೂಲಕ ಉಪ್ಪಿನಂಗಡಿ-ಕಡಬ ರಾಜ್ಯ ಹೆದ್ದಾರಿಯಲ್ಲಿ ಬಂದವರು ಆತೂರು ಸೊಸೈಟಿಯ ಮುಂಭಾಗ ನೆಲ್ಯಾಡಿ ಕಡೆಗೆ ಹೋಗುವ ರಸ್ತೆಗೆ ಸ್ಕೂಟರ್ ತಿರುಗಿಸಲು ಮುಂದಾಗುತ್ತಿದ್ದಂತೆ ಹಿಂದಿನಿಂದ ಇಳಂತಿಲ ನಿವಾಸಿ ಜಯಪ್ರಕಾಶ್ ಎಂಬವರು ಚಲಾಯಿಸಿಕೊಂಡು ಬರುತ್ತಿದ್ದ ಬೈಕ್(ಕೆಎ 21 ಎಸ್ 3583)ಡಿಕ್ಕಿಯಾಗಿದೆ. ಸ್ಕೂಟರ್‌ಗೆ ಡಿಕ್ಕಿಯಾದ ಬೈಕ್ ಸುಮಾರು 30 ಮೀಟರ್ ದೂರದಲ್ಲಿ ರಸ್ತೆಯ ಇನ್ನೊಂದು ಬದಿಯಲ್ಲಿ ನಿಲ್ಲಿಸಿದ್ದ ಬೊಲೆರೋ ವಾಹನಕ್ಕೆ ಬೈಕ್ ಡಿಕ್ಕಿಯಾಗಿ ನಿಂತಿದೆ. ಘಟನೆಯಲ್ಲಿ ಬೈಕ್ ಸವಾರ ಜಯಪ್ರಕಾಶ್‌ರವರು ಗಂಭೀರ ಗಾಯಗೊಂಡಿದ್ದು ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ. ಸ್ಕೂಟರ್ ಸವಾರ ಜಾನ್ ಎಂಬವರು ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ. ಕಡಬ ಎಸ್‌ಐ ಆಂಜನೇಯ ರೆಡ್ಡಿ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ.

LEAVE A REPLY

Please enter your comment!
Please enter your name here