ಪುತ್ತೂರು ಶ್ರೀ ಶಾರದಾ ಭಜನಾ ಮಂದಿರದಲ್ಲಿ ಶಾರದಾ ವಿಗ್ರಹ ಪ್ರತಿಷ್ಠೆ

0

ಪುತ್ತೂರು: ಇಲ್ಲಿನ ಮಹಾಲಿಂಗೇಶ್ವರ ದೇವಳದ ವಠಾರದಲ್ಲಿರುವ ಶ್ರೀ ಶಾರದಾ ಭಜನಾ ಮಂದಿರದಲ್ಲಿ ನವರಾತ್ರಿ ಉತ್ಸವ ನಡೆಯುತ್ತಿದ್ದು, ಅ.2ರಂದು ಶ್ರೀದೇವರ ವಿಗ್ರಹ ಪ್ರತಿಷ್ಠೆ ನಡೆಯಿತು.

ಬೊಳುವಾರಿನಿಂದ ವಾಹನದಲ್ಲಿ ಮೆರವಣಿಗೆ ಮೂಲಕ ಮಂದಿರಕ್ಕೆ ಕರೆತರಲಾಯಿತು. ಪ್ರಭು ಸ್ಟುಡಿಯೋನ ಮಾಲಕ ಶ್ರೀನಿವಾಸ್ ಪ್ರಭು ವಿಗ್ರಹ ರಚನೆ ಮಾಡಿದ್ದರು. ಮಧ್ಯಾಹ್ನ ಶ್ರೀದೇವಿಗೆ ಮಹಾಪೂಜೆ ನಡೆದು ಭಕ್ತಾದಿಗಳಿಗೆ ಹಾಲು ಪಾಯಸ ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಮಂದಿರದ ಅರ್ಚಕರು, ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here