ಭಾರತ ಕಟ್ಟಡ ಕಾರ್ಮಿಕ ಸಂಘದ ಮಾಸಿಕ ಸಭೆ

0

ಸಚಿವರಿಂದ ಕಾರ್ಮಿಕರಿಗೆ ಬಸ್ ಉಚಿತ ಬಸ್ ಪಾಸ್ -ಲೋಕೇಶ್ ಹೆಗ್ಡೆ

ಪುತ್ತೂರು: ಸರಕಾರ ಕಾರ್ಮಿಕರ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದೆ. ಕಾರ್ಮಿಕರ ಬಗ್ಗೆ ಕಳಕಳಿಯುಳ್ಳ ಸಚಿವರು ಕಟ್ಟಡ ಕಾರ್ಮಿಕರಿಗೆ ಉಚಿತ ಬಸ್ ಪಾಸ್ ನೀಡುವ ನಿರ್ಧಾರ ಮಾಡಿರುವುದು ಅತ್ಯುತ್ತಮ ನಿರ್ಧಾರ ಎಂದು ಭಾರತ ಕಟ್ಟಡ ಕಾರ್ಮಿಕ ಸಂಘದ ಸಭೆಯು ಗೌರವಾಧ್ಯಕ್ಷ ಲೋಕೇಶ ಹೆಗ್ಡೆ ಹೇಳಿದರು.


ಬೊಳುವಾರಿನಲ್ಲ ನಡೆದ ಭಾರತ್ ಕಟ್ಟಡ ಕಾರ್ಮಿಕರ ಸಂಘದ ಮಾಸಿಕ ಸಭೆಯಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಭೆಯಲ್ಲಿ ಇತ್ತೀಚೆಗೆ ನಡೆದ ಉಚಿತ ವೈದ್ಯಕೀಯ ಶಿಬಿದ ಕುರಿತು ಆಸ್ಪತ್ರೆಯಿಂದ ಬಂದಿರುವ ತಪಾಸಣೆಗೊಳಪಟ್ಟವರ ವರದಿಯನ್ನು ವಿತರಣೆ ಮಾಡಲಾಯಿತು ಬಳಿಕ ಸಂಘದ ಚಟುವಟಿಕೆ ಕುರಿತು ಚರ್ಚಿಸಲಾಯಿತು. ಸಂಘದ ಅಧ್ಯಕ್ಷ ಇನಾಸ್ ವೇಗಸ್ ಪ್ರಾರಂಭದಲ್ಲಿ ಸ್ವಾಗತಿಸಿದರು. ಸಂಘದ ಅಧ್ಯಕ್ಷ ಇನಾಸ್ ವೇಗಸ್, ಕಾರ್ಯಾಧ್ಯಕ್ಷ ಪೌಲ್ ಡಿಸೋಜ, ಉಪಾಧ್ಯಕ್ಷ ರುಕ್ಮಯ ಗೌಡ, ಕಾರ್ಯದರ್ಶಿ ಮಹಮ್ಮದ್ ಅಶ್ರಫ್ ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here