ನಿಡ್ಪಳ್ಳಿ ಗ್ರಾಮ ಪಂಚಾಯತ್ ವತಿಯಿಂದ ಕಬಡ್ಡಿ ಪಂದ್ಯಾಟ;  ನವಜ್ಯೋತಿ ಯುವಕ ಮಂಡಲ ತಂಬುತ್ತಡ್ಕ ತಾಲೂಕು ಮಟ್ಟಕ್ಕೆ

0

ನಿಡ್ಪಳ್ಳಿ;  ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ದ.ಕ.ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಪುತ್ತೂರು ಹಾಗೂ ಗ್ರಾಮ ಪಂಚಾಯತ್ ನಿಡ್ಪಳ್ಳಿ ಇದರ ಸಹಯೋಗದಲ್ಲಿ ಪಂಚಾಯತ್ ಮಟ್ಟದ ಪುರುಷರ ಕಬಡ್ಡಿ ಪಂದ್ಯಾಟ ಅ.2 ರಂದು ಮುಡ್ಪಿನಡ್ಕದಲ್ಲಿ ನಡೆಯಿತು.
ಗ್ರಾಮೀಣ ಕ್ರೀಡೆಗಳನ್ನು ಪ್ರೋತ್ಸಾಹಿಸಲು ಕ್ರೀಡಾಕೂಟ ಆಯೋಜಿಸಲು ಸರಕಾರ ನಿರ್ದೇಶನ ನೀಡಿದ ಕಾರಣ ನಿಡ್ಪಳ್ಳಿ ಗ್ರಾಮ ಪಂಚಾಯತ್  ವತಿಯಿಂದ ಗ್ರಾಮ ಮಟ್ಟದಲ್ಲಿ ಈ ಕಬ್ಬಡ್ಡಿ ಪಂದ್ಯಾಟವನ್ನು ಆಯೋಜಿಸಲಾಗಿತ್ತು.
ಫಲಿತಾಂಶ;  ನವಜ್ಯೋತಿ ಯುವಕ ಮಂಡಲ ತಂಬುತ್ತಡ್ಕ ಪ್ರಥಮ,  ಶಾಂತದುರ್ಗಾ ಸ್ಪೋರ್ಟ್ಸ್ ಕ್ಲಬ್ (ರಿ) ನಿಡ್ಪಳ್ಳಿ ದ್ವಿತೀಯ ಸ್ಥಾನ ಪಡೆಯಿತು.  ಉತ್ತಮ ದಾಳಿಗಾರನಾಗಿ ನವಜ್ಯೋತಿ ಯುವಕ ಮಂಡಲ ತಂಡದ ಶ್ರುತೇಶ್, ಉತ್ತಮ ಹಿಡಿತಗಾರನಾಗಿ ಶಾಂತದುರ್ಗಾ ಸ್ಪೋರ್ಟ್ಸ್ ಕ್ಲಬ್ ತಂಡದ ರಕ್ಷಿತ್ ಪಡೆದುಕೊಂಡರು. ಪ್ರಥಮ ಸ್ಥಾನ ಗಳಿಸಿದ ತಂಡ ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದೆ.
ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ  ಸಂಧ್ಯಾಲಕ್ಷ್ಮಿ , ಅಧ್ಯಕ್ಷರಾದ  ಗೀತಾ.ಡಿ , ಸದಸ್ಯರಾದ ಮುರಳೀಕೃಷ್ಣ  ಮುಂಡೂರು, ಬಾಲಚಂದ್ರ ಕುಜುಂಬೋಡಿ ಉಪಸ್ಥಿತರಿದ್ದರು. ಮುರಳೀಕೃಷ್ಣ  ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

LEAVE A REPLY

Please enter your comment!
Please enter your name here