ನೀರಕಟ್ಟೆ: ನುರಾನಿಯ ಮಸ್ಜಿದ್‌ನಲ್ಲಿ ಈದ್‌ಮಿಲಾದ್ ಆಚರಣೆ-ಉಚಿತ ಐಸ್‌ಕ್ರೀಮ್ ವಿತರಣೆ

0

ನೆಲ್ಯಾಡಿ: ಬಜತ್ತೂರು ಗ್ರಾಮದ ನೀರಕಟ್ಟೆ ನೂರಾನಿಯ ಮಸ್ಜಿದ್‌ನಲ್ಲಿ ಅ.11ರಂದು ಸಂಭ್ರಮದಿಂದ ಈದ್‌ಮಿಲಾದ್ ಆಚರಿಸಲಾಯಿತು. ಈ ಸಂದರ್ಭದಲ್ಲಿ ಎಸ್‌ವೈಎಸ್ ಹಾಗೂ ಎಸ್‌ಎಸ್‌ಎಫ್ ವತಿಯಿಂದ ಉಚಿತವಾಗಿ ಐಸ್‌ಕ್ರೀಂ ವಿತರಿಸಲಾಯಿತು.

ಮಧ್ಯಾಹ್ನ ಮಸೀದಿ ಗೌರವಾಧ್ಯಕ್ಷ ಹಂಝ ಮುಸ್ಲಿಯಾರ್‌ರವರ ಅಧ್ಯಕ್ಷತೆಯಲ್ಲಿ ಮೌಲೂದು ಕಾರ್ಯಕ್ರಮ ನಡೆಯಿತು. ಮಜ್ಲಿಸ್‌ನಲ್ಲಿ ನೀರಕಟ್ಟೆ ಮಸೀದಿ ಅಧ್ಯಕ್ಷ ಹಸನಬ್ಬ, ಇಮಾಮು ಅಬ್ದುಲ್ ಲತೀಫ್ ಮದನಿ, ಆದಂ ಮದನಿ, ಕೇಂದ್ರ ಜುಮ್ಮಾ ಮಸೀದಿಯ ಸದರ್ ಉಸ್ತಾದ್ ಸಿದ್ದೀಕ್ ಸಹದಿ, ಉಪಾಧ್ಯಕ್ಷ ಅಬೂಬಕ್ಕರ್ ಹಾಜಿ, ಕಾರ್ಯದರ್ಶಿ ಎನ್.ಅಹಮದ್‌ಬಾವಾ ನೀರಕಟ್ಟೆ, ಮಸೀದಿ ಕಾರ್ಯದರ್ಶಿ ಇಸ್ಮಾಯಿಲ್ ಮುಸ್ಲಿಯಾರ್, ಧಾರ್ಮಿಕ ಗುರುಗಳು, ಊರಿನ ಹಿರಿಯರು, ಮಕ್ಕಳು ಭಾಗವಹಿಸಿದ್ದರು. ರಾತ್ರಿ ಮದ್ರಸದ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಈದ್ ಮಿಲಾದ್ ಪ್ರಯುಕ್ತ ಎಸ್‌ವೈಎಸ್ ಹಾಗೂ ಎಸ್‌ಎಸ್‌ಎಫ್ ಕಾರ್ಯಕರ್ತರಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ವಾಹನ ಪ್ರಯಾಣಿಕರಿಗೆ ಮಧ್ಯಾಹ್ನದಿಂದ ರಾತ್ರಿ ತನಕ ಉಚಿತವಾಗಿ ಐಸ್‌ಕ್ರೀಂ ವಿತರಿಸಲಾಯಿತು.

LEAVE A REPLY

Please enter your comment!
Please enter your name here