ರೆಂಜ: ಶ್ರೀರಾಮನಗರ ಅಯ್ಯಪ್ಪ ಭಜನಾ ಮಂದಿರ ಬೆಳ್ಳಿ ಹಬ್ಬ ಸಮಿತಿ ರಚನೆ

0

ಗೌರವಾಧ್ಯಕ್ಷ: ಶಂಕರನಾರಾಯಣ ರಾವ್, ಅಧ್ಯಕ್ಷರಾಗಿ‌ ಪ್ರಕಾಶ್ ರೈ, ಕಾರ್ಯದರ್ಶಿ: ರಾಜೇಶ್ ಎನ್.‌, ಕೋಶಾಧಿಕಾರಿ: ಶಿವಪ್ರಸಾದ್ ತಲೆಪ್ಪಾಡಿ

ಬೆಟ್ಟಂಪಾಡಿ: ಇಲ್ಲಿನ‌ ರೆಂಜ ಶ್ರೀ ಅಯ್ಯಪ್ಪ ಭಜನಾ ಮಂದಿರದ ಬೆಳ್ಳಿಹಬ್ಬ ಮಹೋತ್ಸವ ದಶಂಬರ್ 22 ರಂದು ನಡೆಯಲಿದ್ದು, ಕಾರ್ಯಕ್ರಮದ ಪೂರ್ವಭಾವಿ ಸಮಾಲೋಚನಾ ಸಭೆ ಹಾಗೂ ಬೆಳ್ಳಿಹಬ್ಬ ಸಮಿತಿಯನ್ನು ಇತ್ತೀಚೆಗೆ ರಚಿಸಲಾಯಿತು‌.

ಗೌರವಾಧ್ಯಕ್ಷರಾಗಿ ಶಂಕರನಾರಾಯಣ ರಾವ್ ಪಾರ, ಅಧ್ಯಕ್ಷರಾಗಿ ಪ್ರಕಾಶ್ ರೈ ಬೈಲಾಡಿ, ಕಾರ್ಯದರ್ಶಿಯಾಗಿ ರಾಜೇಶ್ ನೆಲ್ಲಿತ್ತಡ್ಕ, ಕೋಶಾಧಿಕಾರಿಯಾಗಿ ಶಿವಪ್ರಸಾದ್ ತಲೆಪ್ಪಾಡಿ, ಗೌರವ ಸಲಹೆಗಾರರಾಗಿ ಶಶಿಕುಮಾರ್ ರೈ ಬಾಲ್ಯೊಟ್ಟು, ಶೇಷಪ್ಪ ರೈ ಮೂರ್ಕಾಜೆ, ದುಗ್ಗಪ್ಪ ನಾಯ್ಕ‌ ಕಜೆ, ಬಾಬು ಗೌಡ ಪಾರ, ದೇರಣ್ಣ ಚಿಕ್ಕೋಡಿ, ಉಪಾಧ್ಯಕ್ಷರಾಗಿ ದಾಮೋದರ ಕಜೆ, ಜಯರಾಮ ರೈ ಮೂರ್ಕಾಜೆ, ಜತೆ ಕಾರ್ಯದರ್ಶಿಯಾಗಿ ಸತೀಶ್ ಗೌಡ ಪಾರ ಪೊಯ್ಯೆ ರವರನ್ನು ಆಯ್ಕೆ ಮಾಡಲಾಯಿತು.

ಈ ಸಂದರ್ಭದಲ್ಲಿ ಶ್ರೀ ಅಯ್ಯಪ್ಪ ಭಜನಾ ಸೇವಾ ಸಮಿತಿ ಗೌರವಾಧ್ಯಕ್ಷ ಕರುಣಾಕರ ಶೆಟ್ಟಿ ಕೊಮ್ಮಂಡ, ಅಧ್ಯಕ್ಷ ಬಾಬು ಗೌಡ ಪಾರ, ಸಂಚಾಲಕ ಕೃಷ್ಣಪ್ಪ ಗೌಡ ರೆಂಜ, ಪ್ರ.‌ಕಾರ್ಯದರ್ಶಿ ರವಿನಾಥ ಕೋನಡ್ಕ, ಕೋಶಾಧಿಕಾರಿ ಅಂಕಿತ್ ಕೋನಡ್ಕ, ಅಯ್ಯಪ್ಪ ಸೇವಾ ಸಮಿತಿ ಸದಸ್ಯರು, ಭಕ್ತಾಭಿಮಾನಿಗಳು ಉಪಸ್ಥಿತರಿದ್ದರು.

ಇದೇ ವೇಳೆ ಕಾರ್ಯಕ್ರಮದ ವಿವಿಧ ಉಪಸಮಿತಿಗಳಿಗೆ ಸಂಚಾಲಕರು ಮತ್ತು ಸದಸ್ಯರ ಆಯ್ಕೆ ನಡೆಯಿತು. ಬೆಳ್ಳಿಹಬ್ಬ ಸಮಿತಿ ರಾಜೇಶ್ ನೆಲ್ಲಿತ್ತಡ್ಕ ಸ್ವಾಗತಿಸಿ, ಕೋಶಾಧಿಕಾರಿ ಶಿವಪ್ರಸಾದ್ ತಲೆಪ್ಪಾಡಿ ವಂದಿಸಿದರು.

LEAVE A REPLY

Please enter your comment!
Please enter your name here