ಕೊರಮೇರು: ತೋಡಿನ ನೀರಿಗೆ ಸೇರಿಕೊಂಡ ರಾಸಾಯನಿಕ; ಸ್ಥಳಕ್ಕೆ ಕಡಬ ತಹಶೀಲ್ದಾರ್ ಭೇಟಿ

0

ನೆಲ್ಯಾಡಿ: ಹರಿಯುವ ನೀರಿಗೆ ರಾಸಾಯನಿಕ ಪದಾರ್ಥ ಸೇರಿಕೊಂಡ ಪರಿಣಾಮ ಮೀನು ಸೇರಿದಂತೆ ನೂರಾರು ಜಲಚರಗಳು ಸತ್ತುಹೋಗಿರುವ ಇಚ್ಲಂಪಾಡಿ ಗ್ರಾಮದ ಕೊರಮೇರು ಪ್ರದೇಶಕ್ಕೆ ಕಡಬ ತಹಶೀಲ್ದಾರ್ ರಮೇಶ್‌ಬಾಬು ಅ.12ರಂದು ಭೇಟಿ ನೀಡಿ ಪರಿಶೀಲನೆ ನಡೆಸಿದರು.


ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಇಚ್ಲಂಪಾಡಿ ಗ್ರಾಮದ ಕೊರಮೇರು ಎಂಬಲ್ಲಿ ಯಾರೋ ಟ್ಯಾಂಕರ್‌ನಿಂದ ಹರಿಯುವ ತೋಡಿನ ನೀರಿಗೆ ರಾಸಾಯನಿಕ ಪದಾರ್ಥ ಹರಿಯಬಿಟ್ಟಿದ್ದ ಪರಿಣಾಮ ತೋಡಿನಲ್ಲಿದ್ದ ಮೀನು ಸೇರಿದಂತೆ ನೂರಾರು ಜಲಚರಗಳು ಸಾವನ್ನಪ್ಪಿದ್ದವು. ಈ ಹಿನ್ನೆಲೆಯಲ್ಲಿ ಕಡಬ ತಹಶೀಲ್ದಾರ್ ರಮೇಶ್‌ಬಾಬುರವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೌಕ್ರಾಡಿ ಗ್ರಾ.ಪಂ.ಸದಸ್ಯ ವಿಶ್ವನಾಥ ಗೌಡ ಕೊರಮೇರುರವರು ತಹಶೀಲ್ದಾರ್‌ರವರಿಗೆ ಮಾಹಿತಿ ನೀಡಿದರು.

LEAVE A REPLY

Please enter your comment!
Please enter your name here