ಕರಾಟೆ ಕೊಡಗು ಕಪ್ -‌ ಕೆಯ್ಯೂರು ಕೆಪಿಎಸ್ ವಿದ್ಯಾರ್ಥಿಗಳಿಗೆ ಬಹುಮಾನ

0

ಪುತ್ತೂರು: ಮಡಿಕೇರಿಯ ಕುಶಾಲನಗರ ರೈತ ಸಭಾಂಗಣದಲ್ಲಿ ಅ.9 ರಂದು ನಡೆದ ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಕೆಯ್ಯೂರು ಶಾಲೆಯ ದ್ವಿತೀಯ ಪಿಯುಸಿ ವಿದ್ಯಾರ್ಥಿ ಅನುಶ್ ರೈ ಕಟಾ ಮತ್ತು ಕುಮಿಟೆಯಲ್ಲಿ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. ಇವರು ಕೆಯ್ಯೂರು ಜಯ ಮತ್ತು ಪದ್ಮನಾಭ ರೈ ಯವರ ಪುತ್ರ.  7ನೇ ತರಗತಿಯ ಧೃತಿ ರೈ ಕಟಾ ವಿಭಾಗದಲ್ಲಿ ಪ್ರಥಮ ಕುಮಿಟೆಯಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ಇವರು ಚಾವಡಿತಾರು ಜತ್ತಪ್ಪ ರೈ ಮತ್ತು ರೇವತಿರವರ ಪುತ್ರಿ.  7ನೇ ತರಗತಿಯ ತನುಷ್ ಕಟಾದಲ್ಲಿ ತೃತೀಯ ಸ್ಥಾನ ಪಡೆದು ಕೊಂಡಿದ್ದಾರೆ. ಇವರು ಪೋಯ್ಯೊಳೆ ಜಗನ್ನಾಥ ಮತ್ತು ಜಾನಕಿರವರ ಪುತ್ರರಾಗಿದ್ದಾರೆ.

LEAVE A REPLY

Please enter your comment!
Please enter your name here