ನಮ್ಮ ರೆನಾಲ್ಟ್‌ ಗಾಡಿ ಹಬ್ಬದ ಮೂಲಕ ಮೆಗಾ ವಿನಿಮಯ ಮೇಳಕ್ಕೆ ಚಾಲನೆ

0

ಪುತ್ತೂರು : ಆಕರ್ಷಕ ಹಾಗೂ ಭಿನ್ನ ಶೈಲಿಯ ಕಾರುಗಳ ತಯಾರಿಕೆಯಲ್ಲಿ ಗ್ರಾಹಕರನ್ನೂ ಆಕರ್ಷಿಸುವಲ್ಲಿ ಜನಪ್ರಿಯ ಎನಿಸಿಕೊಂಡಿರುವ ಹೆಸರಾಂತ ,ರೆನಾಲ್ಟ್ ಇಂಡಿಯಾವು ತನ್ನ ಕಾರುಗಳ ಮಾರಾಟ,ಸೇವಾ ಸಂಸ್ಥೆ ಮಂಗಳೂರಿನ ಕೂಳೂರು ಬಳಿ ಕಾರ್ಯಚರಿಸುತ್ತಿರುವ’ ಎನಾಕ್ ರೆನಾಲ್ಟ್ ‘ಇದರ ಸಹಸಂಸ್ಥೆ ದರ್ಬೆ ಬೈಪಾಸ್ ಬಳಿಯ ಗುರುಪ್ರಸಾದ್ ಬಿಲ್ಡಿಂಗ್ ಇಲ್ಲಿರುವ ‘ ರೆನಾಲ್ಟ್‌ ಪುತ್ತೂರು’ ವತಿಯಿಂದ ಕಾರು ಪ್ರಿಯರಿಗಾಗಿ ನಮ್ಮ ರೆನಾಲ್ಟ್‌ ಗಾಡಿ ಹಬ್ಬದ ಮೂಲಕ ಅ.14 ಮತ್ತು 15 ಎರಡು ದಿನಗಳ ಬೃಹತ್ ಮೆಗಾ ಎಕ್ಸ್ಚೇಂಜ್ ಮೇಳ ವನ್ನು ಅಯೋಜಿಸಿದ್ದು ,ಅ.14 ಸಂಸ್ಥೆಯ ಗ್ರಾಹಕರಾದ ಡಾ.ಅನಿಲ ದೀಪಕ್ ರವರು ದೀಪ ಪ್ರಜ್ವಲಿಸೋ ಮೂಲಕ ಮೇಳವನ್ನು ಉದ್ಘಾಟಿಸಿ ,ಹಾರೈಸಿದರು.

ಗುರು ಪ್ರಸಾದ್ ಬಿಲ್ಡಿಂಗ್ ಮಾಲಕ ವಾಸುದೇವ ಆಚಾರ್ಯ ,ಶೋ ರೂಂ ಇನ್ಚಾರ್ಜ್ ಚಂಚಲ ,ಸೇಲ್ಸ್ ಕನ್ಸಲ್ಟಂಟ್ ರಾಕೇಶ್ ,ವಿಶಾಲ್ ಹಾಗೂ ನಮೃತಾ ಉಪಸ್ಥಿತರಿದ್ದರು. ಇದಕ್ಕೂ ಮೊದಲು ಪ್ರಥಮ ಗ್ರಾಹಕರಾದ ಕೊಲ್ಯ ನಿವಾಸಿ ಕೃಷ್ಣಪ್ಪ ಪೂಜಾರಿ ಇವರಿಗೆ ಶೋ ರೂಂ ಇನ್ ಚಾರ್ಜ್ ಚಂಚಲ ಕೀಲಿ ನೀಡಿ ಅಭಿನಂದಿಸಿ ,ಶುಭ ಕೋರಿದರು ,ಕುಟುಂಬ ವರ್ಗದವರು ಹಾಜರಿದ್ದರು.

ಆ ಬಳಿಕ ಅವರು ಮಾತನಾಡಿ ,ಕಾರು ಪ್ರಿಯರು ಈ ವಿನಿಮಯ ಮೇಳದ ಮೂಲಕ ವಿನೂತನ ರೆನಾಲ್ಟ್‌ ಕಾರುಗಳೊಡನೆ ತಮ್ಮ ಹಳೆಯ ಮಾದರಿ ಕಾರುಗಳನ್ನು ಅತ್ಯುತ್ತಮ ಬೆಲೆಯೊಂದಿಗೆ ,ಸುಲಭ ,ಸರಳ ಫೈನಾನ್ಸ್ ಹಾಗೂ ಅತೀ ಕಡಿಮೆ ಬಡ್ಡಿ ದರದೊಂದಿಗೆ ಖರೀದಿ ಮಾಡ ಬಹುದು.ಇಷ್ಟೇಯಲ್ಲದೇ ಪ್ರತಿ ಕಾರಿನಲ್ಲೂ ಕೂಡ ಉಳಿತಾಯವಕಾಶವಿದ್ದು ಗ್ರಾಹಕರು ಈ ಮೇಳದ ಪ್ರಯೋಜನ ಪಡೆಯುವಂತೆ ಹೇಳಿ ಸಹಕಾರ ಯಾಚಿಸಿದರು.

 

* ಪ್ರತಿ ಮಾದರಿಯ ಕಾರಿನಲ್ಲೂ ಉಳಿತಾಯವಕಾಶ

* ಹಳೇಯ ಕಾರನ್ನು ಹೊಚ್ಚ ಹೊಸ ಕಾರಿನೊಡನೆ ಬದಲಾಯಿಸ ಬಹುದು

* ಮೇಳವು ಅ.15 ಸಂಜೆ ಕೊನೆಯಾಗಲಿದ್ದು ,ಅಧಿಕ ಮಾಹಿತಿಗಾಗಿ ಮೊಬೈಲ್ ಸಂಖ್ಯೆ -9606952876 ಕರೆಮಾಡಿ.

LEAVE A REPLY

Please enter your comment!
Please enter your name here