ಆಲಂಕಾರು: ಹೋಟೆಲ್ ಮಾಲಕರಿಗೆ ಹಲ್ಲೆ: ಕಡಬ ಠಾಣೆಯಲ್ಲಿ ಪ್ರಕರಣ ದಾಖಲು

0

ಕಡಬ: ಇಬ್ಬರ ಮದ್ಯೆ ಉಂಟಾದ ಮನಸ್ತಾಪ ಹಲ್ಲೆಯ ಹಂತಕ್ಕೆ ತಲುಪಿ ಬಳಿಕ ಹಲ್ಲೆ ಮತ್ತು ಜೀವ ಬೆದರಿಕೆ ಹಾಕಿರುವುದಾಗಿ ಆರೋಪಿಸಿ ವ್ಯಕ್ತಿಯೊಬ್ಬರು ಠಾಣೆಗೆ ದೂರು ನೀಡಿದ್ದು ಓರ್ವನ ವಿರುದ್ದ ಪ್ರಕರಣ ದಾಖಲಾಗಿದೆ.

ಆಲಂಕಾರಿನ ಹಳೆನೇರೆಂಕಿ ಗ್ರಾಮದ ಕಾಪಿಕಾಡುವಿನ ನಾರಾಯಣ ಅಮೈ ಎಂಬವರು ಠಾಣೆಗೆ ದೂರು ನೀಡಿದ್ದಾರೆ. ಆಲಂಕಾರಿನಲ್ಲಿ ತನ್ನ ಹೋಟೆಲ್‌ನಲ್ಲೇ ವ್ಯಾಪಾರ ಮಾಡುತ್ತಿರುವ ವೇಳೆ ಸಂಬಂಧಿ ಗೋಪಾಲಕೃಷ್ಣ ಎಂಬವರು ಬಂದು ಅವಾಚ್ಯ ಶಬ್ದಗಳಿಂದ ಬೈದು ಕೈಯಲ್ಲಿ ಇದ್ದ ಕತ್ತಿಯಿಂದ ಹಲ್ಲೆ ನಡೆಸಿದಲ್ಲದೆ, ಜತೆಯಲ್ಲಿದ್ದ ಪತ್ನಿಯ ಕೈಯನ್ನು ತಳ್ಳಿ ಜೀವ ಬೆದರಿಕೆ ಹಾಕಿರುವುದಾಗಿ ದೂರಿನಲ್ಲಿ ವಿವರಿಸಿದ್ದಾರೆ.

ಹೋಟೆಲ್‌ನಲ್ಲಿದ್ದ ಕೆಲಸದವರು ಬಂದಾಗ ಕತ್ತಿಯನ್ನು ಅಲ್ಲಿಯೇ ಬಿಸಾಡಿ ಹಲ್ಲೆ ನಡೆಸಿದಾತ ಪರಾರಿಯಾಗಿದ್ದ. ನಾನು ನನ್ನ ಪತ್ನಿ ಚಿಕಿತ್ಸೆಗಾಗಿ ಕಡಬ ಸಮುದಾಯ ಆಸ್ಪತ್ರೆಯಲ್ಲಿ ದಾಖಲಾಗಿ ಬಿಡುಗಡೆಯಾಗಿದ್ದು ಈ ಬಗ್ಗೆ ಅ.11ರಂದು ನಾನು ದಾಖಲಾಗಿದ್ದ ಸಮಯ ಪೊಲೀಸರ ಮುಂದೆ ವಸ್ತುವಿನಿಂದ ಹಲ್ಲೆ ಮಾಡಿದ್ದಾಗಿ ತಿಳಿಸಿದ್ದೆ ಆದರೆ ಅದು ಕತ್ತಿಯಿಂದ ಹಲ್ಲೆ ನಡೆಸಿರುದಾಗಿರುತ್ತದೆ. ಆದುದರಿಂದ ಆರೋಪಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ನಾರಾಯಣ ಅಮೈ ದೂರಿನಲ್ಲಿ ತಿಳಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here