ಯೋಗಾಸನ – ಕಾಣಿಯೂರು ಪ್ರಗತಿಯ ಮೋನಿಷ್ ತಂಟೆಪ್ಪಾಡಿ ರಾಜ್ಯ ಮಟ್ಟಕ್ಕೆ ಆಯ್ಕೆ

0

ಕಾಣಿಯೂರು: ಶಾಲಾ ಶಿಕ್ಷಣ  ಮತ್ತು ಸಾಕ್ಷರತಾ  ಇಲಾಖೆ, ವಿಭಾಗೀಯ ಕಾರ್ಯದರ್ಶಿಗಳು  ಹಾಗೂ ಪದನಿಮಿತ್ತ ಜಂಟಿ  ಕಛೇರಿ  ಮೈಸೂರು  ವಿಭಾಗ, ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕರ್ನಾಟಕ ವಸತಿ  ಶಿಕ್ಷಣ  ಸಂಸ್ಥೆಗಳ ಸಂಘ, ಬೆಂಗಳೂರು ಇದರ ವತಿಯಿಂದ ಮೊರಾರ್ಜಿ ದೇಸಾಯಿ ವಸತಿ ಶಾಲಾ ಮಿಯಾರು ಕಾರ್ಕಳ ದಲ್ಲಿ ಅ 18, 19ರಂದು ನಡೆದ  ಯೋಗಾಸನ ಸ್ಪರ್ಧೆಯಲ್ಲಿ ಪ್ರಾಥಮಿಕ  ವಿಭಾಗದಲ್ಲಿ ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ 6ನೇ ತರಗತಿಯ ವಿದ್ಯಾರ್ಥಿ ಮೋನಿಷ್ ತಂಟೆಪ್ಪಾಡಿ ತೃತೀಯ  ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಇವರು ಸುಳ್ಯ ತಾಲೂಕಿನ ಕಳಂಜ ಗ್ರಾಮದ ತಂಟೆಪ್ಪಾಡಿ ವಿಶ್ವನಾಥ ಟಿ ದಯಾಮಣಿ ದಂಪತಿಗಳ ಪುತ್ರ. ಇವರು ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ ಯೋಗ ಶಿಕ್ಷಕರಾದ ಶರತ್ ಮರ್ಗಿಲಡ್ಕ ರವರ ಜೊತೆ ಮಾರ್ಗದರ್ಶನ ಪಡೆಯುತ್ತಿದ್ದಾರೆ.

LEAVE A REPLY

Please enter your comment!
Please enter your name here