ಕುಕ್ಕಾಜೆ ಶ್ರೀ ಕಾಳಿಕಾಂಬ ಆಂಜನೇಯ ಕ್ಷೇತ್ರದ ಬ್ರಹ್ಮಕಲಶೋತ್ಸವ ಹಿನ್ನೆಲೆ ವಿಟ್ಲ ಕೇಪು ವಲಯ ಸಮಿತಿ ರಚನೆ

0

ವಿಟ್ಲ: ಮಾಣಿಲ ಕುಕ್ಕಾಜೆ ಶ್ರೀ ಕಾಳಿಕಾಂಬ ಆಂಜನೇಯ ಕ್ಷೇತ್ರದಲ್ಲಿ 2023ರ ಮಾರ್ಚ್ ತಿಂಗಳಲ್ಲಿ ನಡೆಯಲಿರುವ ಬ್ರಹ್ಮಕಲಶೋತ್ಸವದ ಹಿನ್ನೆಲೆಯಲ್ಲಿ ಕ್ಷೇತ್ರದ ಧರ್ಮದರ್ಶಿ ಶ್ರೀ ಶ್ರೀಕೃಷ್ಣ ಗುರೂಜಿಯವರ ಮಾರ್ಗದರ್ಶನದಲ್ಲಿ ವಿಟ್ಲದ ಕೇಪುವಿನಲ್ಲಿ ವಲಯ ಸಮಿತಿಯ ರಚನೆ ಮಾಡಲಾಯಿತು. ಧರ್ಮದರ್ಶಿಯವರು ಕ್ಷೇತ್ರದ ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವದ ಕುರಿತಾಗಿ ಮಾಹಿತಿ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸುಧಾಕರ ಪೂಜಾರಿ ಬಡಕೋಡಿ  ಕೇಪು ವಲಯದಿಂದ ಕ್ಷೇತ್ರದ ಅಭಿವೃದ್ಧಿಗೆ ಸಹಕರಿಸುವುದಾಗಿ ಭರವಸೆ ನೀಡಿದರು. ಪದ್ಮನಾಭ ನಾಯ್ಕ ಎರುಂಬು, ಸಂತೋಷ್ ಮೈರೆ, ಚಂದ್ರಶೇಖರ್ ವಳಕಟ್ಟೆ, ಸುರೇಶ್ ಕಾಪಿಕಾಡ್, ಧನಂಜಯ ಕುಮಾರ್ ಅತಿಕ್ರಯಬೈಲು, ಹರೀಶ್ ಗೌಡ ಕೊರತಿಗದ್ದೆ ಬಾಲಕೃಷ್ಣ ಪೂಜಾರಿ ಪೆಲ್ತಡಿ ಹಾಗೂ ಕ್ಷೇತ್ರದ ಜೀರ್ಣೋದ್ಧಾರ ಸಮಿತಿಯ ಕೋಶಾಧಿಕಾರಿ ಕೃಷ್ಣಪ್ಪ ಪೂಜಾರಿ ತಾರಿದಾಳ ಮೊದಲಾದವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ವಲಯ ಸಮಿತಿಯನ್ನು ರಚಿಸಲಾಯಿತು.

ಕೇಪು ವಲಯ ಸಮಿತಿಯ ಕಾರ್ಯಧ್ಯಕ್ಷರಾಗಿ ಸುಧಾಕರ ಪೂಜಾರಿ ಬಡಕೋಡಿ, ಅಧ್ಯಕ್ಷರಾಗಿ ಬಾಲಕೃಷ್ಣ ಪೂಜಾರಿ ಪೆಲ್ತಡಿ, ಉಪಾಧ್ಯಕ್ಷರುಗಳಾಗಿ ಪದ್ಮನಾಭ ಎರುಂಬು, ಯೋಗೀಶ್ ಕಲ್ಲಂಗಳ, ಚಂದ್ರಶೇಖರ ವಳಕಟ್ಟೆ ,ಕಾರ್ಯದರ್ಶಿಯಾಗಿ ಸತೀಶ್ ಕೇಪು, ಶ್ರೇಯಸ್ ಕಲ್ಲಂಗಳ, ಧನಂಜಯ ಅತಿಕ್ರಯಬೈಲು, ಹರೀಶ್ ಕೊರತಿ ಗದ್ದೆ, ಕೋಶಾಧಿಕಾರಿಯಾಗಿ ಭವ್ಯ ಬಡಕೋಡಿ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ಅನಾರೋಗ್ಯದಿಂದಿರುವ ಶರಣ್ ರೈ ಕೇಪುರವರ ಪತ್ನಿಗೆ ಕ್ಷೇತ್ರದ ವತಿಯಿಂದ ಧನಸಹಾಯವನ್ನು ನೀಡುವುದಾಗಿ ಧರ್ಮದರ್ಶಿಗಳು ಭರವಸೆ ನೀಡಿದರು. ನವೀನ್ ಕುಮಾರ್ ಬಿ. ಸ್ವಾಗತಿಸಿ, ಕುಕ್ಕಾಜೆ ಶ್ರೀ ಕಾಳಿಕಾಂಬ ಆಂಜನೇಯ ಕ್ಷೇತ್ರದ ರವಿ ಎಸ್.ಎಂ. ಕುಕ್ಕಾಜೆ ವಂದಿಸಿದರು.

LEAVE A REPLY

Please enter your comment!
Please enter your name here