ಅ.24: ಅಗ್ರಜಾಸ್ ಲಾ ಛೇಂಬರ್ಸ್ ಶುಭಾರಂಭ

0

ಪುತ್ತೂರು: ವಕೀಲರಾದ ಉದಯಚಂದ್ರ ಕರಂಬಾರು ಮತ್ತು ಅಕ್ಷಿತ್ ಎಂ. ಮುರ ಅವರ ಅಗ್ರಜಾಸ್ ಲಾ ಛೇಂಬರ್ಸ್ ಅ.24ರಂದು ಬೆಳಿಗ್ಗೆ 10 ಗಂಟೆಗೆ ಪುತ್ತೂರು ಪೊಲೀಸ್ ಕ್ವಾರ್ಟಸ್ ಬಳಿಯ ಕೋರ್ಟ್ ಹಿಲ್ ರೋಡ್ ಗಜಾನನ ಟವರ್ಸ್ ನ ನೆಲಮಹಡಿಯಲ್ಲಿ ಶುಭಾರಂಭಗೊಳ್ಳಲಿದೆ.

ಹಿರಿಯ ವಕೀಲ ಎಸ್.ಪ್ರವೀಣ್ ಕುಮಾರ್ ಅವರಿಗೆ ಗುರುವಂದನೆ ನಡೆಯಲಿದ್ದು ಶಾಸಕ ಸಂಜೀವ ಮಠಂದೂರು ಕಛೇರಿ ಉದ್ಘಾಟಿಸಲಿದ್ದಾರೆ. ವಕೀಲರ ಸಂಘದ ಅಧ್ಯಕ್ಷ ಮನೋಹರ ಕೆ.ವಿ, ಅಕ್ಷಯ ಗ್ರೂಪ್ ಛೇರ್ಮೆನ್ ಜಯಂತ ನಡುಬೈಲು, ಮುಂಡೂರು ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸುರೇಶ್ ಕುಮಾರ್ ಸೊರಕೆ, ನರಿಮೊಗರು ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷ ವಿ.ಬಾಬು ಶೆಟ್ಟಿ ಮತ್ತು ಕಬಕ ಗ್ರಾ.ಪಂ.ಅಧ್ಯಕ್ಷ ವಿನಯ ಕುಮಾರ್ ಕಲ್ಲೇಗ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here