ಕೊಣಾಲು: ಬೈಕ್‌ಗಳ ಡಿಕ್ಕಿ, ಸವಾರರಿಗೆ ಗಾಯ

0

ನೆಲ್ಯಾಡಿ: ಬೈಕ್‌ಗಳ ನಡುವೆ ಡಿಕ್ಕಿ ಸಂಭವಿಸಿ ಸವಾರರಿಬ್ಬರು ಗಾಯಗೊಂಡಿರುವ ಘಟನೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ನೆಲ್ಯಾಡಿ ಸಮೀಪ ಕೊಣಾಲು ಗ್ರಾಮದ ಆರ್ಲ ಎಂಬಲ್ಲಿ ಅ.23ರಂದು ಬೆಳಿಗ್ಗೆ ನಡೆದಿದೆ.

ಬೈಕ್ ಸವಾರರಾದ ವಳಾಲು ಕೆಳಗಿನ ಮನೆ ನಿವಾಸಿ ಕಾರ್ತಿಕ್ ಕೆ.(20ವ.) ಹಾಗೂ ಕೊಣಾಲು ನಿವಾಸಿ ಜಾರ್ಜ್‌ಕುಟ್ಟಿ ಗಾಯಗೊಂಡಿದ್ದಾರೆ. ಕಾರ್ತಿಕ್‌ರವರು ನೆಲ್ಯಾಡಿಯ ಹೆಚ್‌ಪಿ ಪೆಟ್ರೋಲ್ ಪಂಪ್‌ನಲ್ಲಿ ಕೆಲಸ ಮಾಡಿಕೊಂಡಿದ್ದು ಮನೆಯಿಂದ ಬೈಕ್‌ನಲ್ಲಿ ನೆಲ್ಯಾಡಿಗೆ ಬರುತ್ತಿದ್ದ ವೇಳೆ ರಾಷ್ಟ್ರೀಯ ಹೆದ್ದಾರಿ 75ರ ಕೊಣಾಲು ಗ್ರಾಮದ ಆರ್ಲದಲ್ಲಿ ನೆಲ್ಯಾಡಿಯಿಂದ ಉಪ್ಪಿನಂಗಡಿ ಕಡೆಗೆ ಹೋಗುತ್ತಿದ್ದ ಮೋಟಾರ್ ಸೈಕಲ್ ಸವಾರ ಜಾರ್ಜ್‌ಕುಟ್ಟಿಯವರು ಯಾವುದೇ ಸೂಚನೆ ನೀಡದೇ ಏಕಾಏಕಿ ಬಲಬದಿಗೆ ಚಲಾಯಿಸಿದ ಪರಿಣಾಮ ಎರಡೂ ಬೈಕ್‌ಗಳ ನಡುವೆ ಡಿಕ್ಕಿ ಸಂಭವಿಸಿದೆ. ಘಟನೆಯಲ್ಲಿ ಕಾರ್ತಿಕ್‌ರವರ ಮೂಗು, ಎಡಕಾಲು, ಮಣಿಗಂಟು, ಬೆನ್ನಿಗೆ ಗಾಯವಾಗಿದೆ. ಜಾರ್ಜ್‌ಕುಟ್ಟಿಯವರಿಗೂ ಗಾಯವಾಗಿದೆ.

ಎರಡೂ ಬೈಕ್‌ಗಳು ಜಖಂಗೊಂಡಿವೆ. ಕಾರ್ತಿಕ್‌ರವರು ನೀಡಿದ ದೂರಿನಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here