ಬನ್ನೂರು ವಲಯ ಕಾಂಗ್ರೆಸ್ ಕಾರ್ಯಕರ್ತರ ಸಭೆ- ಸಂಕಪ್ಪ ಗೌಡ ದಂಪತಿಗೆ ಸನ್ಮಾನ

0

ಪುತ್ತೂರು: ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ವ್ಯಾಪ್ತಿಯ ಬನ್ನೂರು ವಲಯ ಕಾಂಗ್ರೆಸ್ ಕಾರ್ಯಕರ್ತರ ಸಭೆ ಪಡ್ನೂರು ಶೀನಪ್ಪ ಪೂಜಾರಿರವರ ನಿವಾಸದಲ್ಲಿ ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ರಾಜಾರಾಮ್. ಕೆ.ಬಿ ಅಧ್ಯಕ್ಷತೆಯಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಹಿರಿಯ ಕಾಂಗ್ರೆಸ್ಸಿಗ ಸಂಕಪ್ಪ ಗೌಡ ದಂಪತಿಯನ್ನು ಸನ್ಮಾನಿಸಲಾಯಿತು. ಹೊಸ ಬೂತ್ ಸಮಿತಿ ರಚಿಸಲಾಯಿತು. ಈ ಕಾರ್ಯಕ್ರಮದಲ್ಲಿ ಭಾರತ್ ಜೂಡೋ ಸಂಯೋಜಕ, ಪುತ್ತೂರು ಪಿಲಿರಂಗ್ ಕಾರ್ಯಕ್ರಮದ ರೂವಾರಿ ಚಂದ್ರಹಾಸ ಶೆಟ್ಟಿ, ಬನ್ನೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ಕಾರ್ಯದರ್ಶಿಗಳಾದ ಉಮಾನಾಥ ಶೆಟ್ಟಿ ಮತ್ತು ಉಲ್ಲಾಸ್ ಕೋಟ್ಯಾನ್, ಬ್ಲಾಕ್ ಕಾರ್ಯದರ್ಶಿ ಜಗನ್ನಾಥ ಶೆಟ್ಟಿ, ಮುಂಚೂಣಿ ಘಟಕದ ಅಧ್ಯಕ್ಷರುಗಳಾದ ಎಲ್ಯಣ್ಣ ಪೂಜಾರಿ, ಮೋಹನ್ ಗುರ್ಜಿನಡ್ಕ, ರಾಮಣ್ಣ ಪಿಲಿಂಜ, ಶಕುಂತಳಾ ಕುಲಾಲ್ ಗಡಿಯಾರ, ಯುವ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಫಾರೂಕ್ ಪೆರ್ನೆ, ಯಂಗ್ ಬ್ರಿಗೇಡ್ ನ ರಂಜಿತ್ ಬಂಗೇರಾ, ಮಾಜಿ ನಿರ್ದೇಶಕ ಕಾರ್ತಿಕ್ ರೈ ಬೆಳ್ಳಿಪ್ಪಾಡಿ, ಹಾಗೂ ಕಾಂಗ್ರೆಸ್ ಮುಖಂಡರುಗಳಾದ ಸೋಮಶೇಖರ್ ಶೆಟ್ಟಿ ಅಳಕೆಮಜಲ್, ರೋಬರ್ಟ್ ಗೊನ್ಸಾಲ್ವಿಸ್ ಪಡ್ನೂರು, ಮಾಜಿ ಪಂಚಾಯತ್ ಸದಸ್ಯ ಮೋಹನ್ ಗೌಡ ವಾಲ್ತಾಜೆ, ಶುಭ, ಲತಾ, ಪದ್ಮಾವತಿ, ರೋಹನ್ ಪೂಜಾರಿ, ವಿಕ್ರಮ್ ಶೆಟ್ಟಿ ಕೋಡಿಂಬಾಡಿ, ಪ್ರವೀಣ್ ಶೆಟ್ಟಿ ಅಳಕೆಮಜಲ್ ಹಾಗೂ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here