ನಿಜವಾದ ಅರ್ಥದಲ್ಲಿ ಹಬ್ಬದ ಆಚರಣೆಯಲ್ಲಿ ಜಗತ್ತು ಬೆಳಗಲಿ

0

ನೆಲಪ್ಪಾಲ್ ಉದ್ಯಾನದಲ್ಲಿ ದೀಪಾವಳಿ ಹಬ್ಬ ಸಂಭ್ರಮಿಸಿದ ಸಂಜೀವ ಮಠಂದೂರು

ಪುತ್ತೂರು: ಹಬ್ಬವನ್ನು ನಿಜವಾದ ಅರ್ಥದಲ್ಲಿ ಸಂಭ್ರಮವನ್ನು ಪಸರಿಸುವ ಮೂಲಕ ಆಚರಿಸೋಣ ಮತ್ತು ಜಗತ್ತನ್ನು ಬೆಳಗಿಸೋಣ. ದೀಪಾವಳಿಯಿಂದ ಸಂತೋಷ, ಸುರಕ್ಷಿತ ಮತ್ತು ಆಶೀರ್ವಾದ ಸಿಗಲಿ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.

ನೆಹರುನಗರ ಸಮೀಪದ ನೆಲಪ್ಪಾಲ್ ಉದ್ಯಾನದಲ್ಲಿ ನಗರಸಭೆ ಅಧ್ಯಕ್ಷ ಕೆ.ಜೀವಂಧರ್ ಜೈನ್ ಅವರ ಅಧ್ಯಕ್ಷತೆಯಲ್ಲಿ ನಡೆದ ದೀಪಾವಳಿ ಸಂಭ್ರಮದಲ್ಲಿ ಅವರು ಮಾತನಾಡಿದರು. ಅವರು ಪರಿಸರದ ಮಂದಿಯೊಂದಿಗೆ ದೀಪ ಬೆಳಗಿಸಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಈ ಸಂದರ್ಭದಲ್ಲಿ ದಿಶಾ ಸದಸ್ಯ ರಾಮದಾಸ್ ಹಾರಾಡಿ, ಸುದರ್ಶನ್ ಮಂಗಳ್‌ಸ್ಟೋರ್, ಪ್ರಶಾಂತ್ ಅಜೇಯನಗರ, ನಿತಿನ್ ಕಲ್ಲೇಗ, ದಯಾನಂದ ನೆಲಪ್ಪಾಲು, ಗಣೇಶ್ ಭಂಡಾರಿ, ವೆಂಕಪ್ಪ ನಾಯ್ಕ್, ಪವನ್, ಹರ್ಷಿತ್, ಗುರುಕಿರಣ್, ತಿಲಕ್, ಧನುಷ್ ಅಜೇಯನಗರ, ವೆಂಕಟ್ರಮಣ, ಬಾಲಕೃಷ್ಣ ನಾಯ್ಕ್, ಬಿಜೆಪಿ ಬೂತ್ ಸಮಿತಿ ಅಧ್ಯಕ್ಷ ನಿತೇಶ್ ನೆಲಪ್ಪಾಲು, ಕಾರ್ಯದರ್ಶಿ ಶ್ರೀಧರ್ ಯು.ಕೆ, ಹೇಮಲತಾ, ಜ್ಯೋತಿ ರವಿದಾಸ್, ರಾಧಾ, ಸುಮಿತ್ರ, ಧಮಯಂತಿ, ಹರೀಶ್ ನಾಯಕ್ ಅಜೇಯನಗರ, ಮನೋಃಹರ್ ಕಲ್ಲೇಗ, ರಾಘವೇಂದ್ರ ಪ್ರಭು, ರವಿಕಿರಣ್ ನೆಲಪ್ಪಾಲು ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here