ಕಾಣಿಯೂರು: ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲೆ ರಾಮಕುಂಜದಲ್ಲಿ ಅ 28 ರಂದು ನಡೆದ ಪ್ರೌಢಶಾಲಾ ವಿಭಾಗದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಪ್ರಗತಿ ವಿದ್ಯಾ ಸಂಸ್ಥೆಯ 10ನೇ ತರಗತಿಯ ವಿದ್ಯಾರ್ಥಿಗಳಾದ ಉತ್ತಮ್ ಜಿ ಮತ್ತು ಹರ್ಷಿತ್ ಕುಮಾರ್ ರಸಪ್ರಶ್ನೆಯಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಉಳಿದಂತೆ ತುಳು ಭಾಷಣದಲ್ಲಿ ಉತ್ತಮ್ ಜಿ ದ್ವಿತೀಯ ಸ್ಥಾನ, ಸಂಸ್ಕೃತ ಧಾರ್ಮಿಕ ಪಠಣದಲ್ಲಿ ರಂಜನ್ ವಿ ದ್ವಿತೀಯ ಸ್ಥಾನ, ಭರತನಾಟ್ಯದಲ್ಲಿ ರಚನಾ ತೃತೀಯ ಸ್ಥಾನ, ಇಂಗ್ಲಿಷ್ ಭಾಷಣದಲ್ಲಿ ಶ್ರಾವ್ಯ ಎಚ್ ತೃತೀಯ ಸ್ಥಾನ, ಭಾವಗೀತೆಯಲ್ಲಿ ಈಶಿತ ತೃತೀಯ ಸ್ಥಾನವನ್ನು ಪಡೆದುಕೊಂಡಿರುತ್ತಾರೆ.
Home ವಿದ್ಯಾಕ್ಷೇತ್ರ ಕಾಣಿಯೂರು ಪ್ರಗತಿಯ ಉತ್ತಮ್, ಹರ್ಷಿತ್ ಕುಮಾರ್ ರಸಪ್ರಶ್ನೆ ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆ