ಗೋಳಿತ್ತೊಟ್ಟು ಸಿದ್ಧಿವಿನಾಯಕ ಸೇವಾ ಸಮಿತಿ  ಮನೆ-ಮನ ಭಜನೆ, ನಗರ ಸಂಕೀರ್ತನಾ ಯಾತ್ರೆ ಹಾಗೂ ಭಜನಾ ಸಮಾವೇಶದ ಆಮಂತ್ರಣ ಪತ್ರ ಬಿಡುಗಡೆ

0


ನೆಲ್ಯಾಡಿ: ಶ್ರೀ ಸಿದ್ಧಿವಿನಾಯಕ ಸೇವಾ ಸಮಿತಿ ವಿನಾಯಕಬೆಟ್ಟ ಗೋಳಿತ್ತೊಟ್ಟು ಇದರ ಆಶ್ರಯದಲ್ಲಿ ನ.೭ರಿಂದ ೧೨ರ ತನಕ ನಡೆಯುವ ಮನೆ-ಮನ ಭಜನೆ ಮತ್ತು ನ.೧೩ರಂದು ವಜ್ರದೇಹಿ ಮಠಾಧೀಶರಾದ ಶ್ರೀ ರಾಜಶೇಖರಾನಂದ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ನಡೆಯುವ ನಗರ ಸಂಕೀರ್ತನಾ ಯಾತ್ರೆ ಹಾಗೂ ಭಜನಾ ಸಮಾವೇಶದ ಆಮಂತ್ರಣ ಪತ್ರ ಬಿಡುಗಡೆಯು ಅ.೨೭ರಂದು ಸಂಜೆ ಗೋಳಿತ್ತೊಟ್ಟು ಶ್ರೀ ಸಿದ್ಧಿವಿನಾಯಕ ಭಜನಾ ಮಂದಿರದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಶ್ರೀ ಸಿದ್ಧಿವಿನಾಯಕ ಸೇವಾ ಸಮಿತಿಯ ಅಧ್ಯಕ್ಷ ಬಾಲಕೃಷ್ಣ ಅಲೆಕ್ಕಿ, ಕಾರ್ಯದರ್ಶಿ ಸುಭಾಷ್ ಶೆಟ್ಟಿ ಪುರ, ಉಪಾಧ್ಯಕ್ಷ ನಾಗೇಶ್ ಸಮರಗುಂಡಿ, ಜತೆ ಕಾರ್ಯದರ್ಶಿ ಅಶೋಕ್ ಶೆಟ್ಟಿ ಪಾತೃಮಾಡಿ, ಕೋಶಾಧಿಕಾರಿ ರಘುನಾಥ್ ಪಾಲೇರಿ, ಕಲಾ ಮಂದಿರ ನಿರ್ವಹಣಾ ಸಮಿತಿಯ ಅಧ್ಯಕ್ಷ ವೆಂಕಪ್ಪ ಗೌಡ ಡೆಬ್ಬೇಲಿ, ಕಾರ್ಯದರ್ಶಿ ಶಿವರಾಮ ಅಲೆಕ್ಕಿ, ಶಿಶು ಮಂದಿರದ ಕಾರ್ಯದರ್ಶಿ ಕೀರ್ತನ್ ಸಣ್ಣಂಪಾಡಿ, ಉಪಾಧ್ಯಕ್ಷ ಹರೀಶ್ ಪಾತೃಮಾಡಿ, ಭಜನಾ ಮಂಡಳಿಯ ಕಾರ್ಯದರ್ಶಿ ಜಯಂತ ಅಂಬರ್ಜೆ ಮುಂತಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here