ಮಠಂತಬೆಟ್ಟು: ಸಿಡಿಲು ಬಡಿದು ಮನೆಗೆ ಹಾನಿ

0

ಪುತ್ತೂರು: ಕೋಡಿಂಬಾಡಿ ಗ್ರಾಮದ ಮಠಂತಬೆಟ್ಟು ನಿವಾಸಿ ಪುರುಷೋತ್ತಮ ನಾಯ್ಕ ಎಂಬವರ ಮನೆಗೆ ಸಿಡಿಲು ಬಡಿದ ಘಟನೆ ನ.4ರಂದು ಸಂಜೆ ನಡೆದಿದೆ. ಸಿಡಿಲು‌‌ ಬಡಿತದಿಂದಾಗಿ ಮನೆಯ ಗೋಡೆ ಬಿರುಕು ಬಿಟ್ಟಿದ್ದು ವಿದ್ಯುತ್ ಉಪಕರಣಗಳು ಸಂಪೂರ್ಣ ಹಾನಿಯಾಗಿದೆ. ಮನೆಯ ಅಂಗಳದಲ್ಲಿರುವ ತೆಂಗಿನ ಮರಕ್ಕೂ ಸಿಡಿಲು ಬಡಿದು ಹಾನಿ‌ ಸಂಭವಿಸಿದೆ. ಸಿಡಿಲು ಬಡಿತದ ವೇಳೆ ಪುರುಷೋತ್ತಮ ನಾಯ್ಕ ಮತ್ತು ಅವರ ಮನೆಯವರು ಯಾರೂ ಮನೆಯಲ್ಲಿ ಇರಲಿಲ್ಲ.‌

LEAVE A REPLY

Please enter your comment!
Please enter your name here