ಕುಕ್ಕಾಜೆ ಶ್ರೀ ಕಾಳಿಕಾಂಬ ಆಂಜನೇಯ ಕ್ಷೇತ್ರದ ಬ್ರಹ್ಮಕಲಶೋತ್ಸವ ಹಿನ್ನೆಲೆ ಸಂಟನಡ್ಕ ದೈವಸ್ಥಾನದಲ್ಲಿ ವಲಯ ಸಮಿತಿ ರಚನೆ

0

ವಿಟ್ಲ: ಮಾಣಿಲ ಕುಕ್ಕಾಜೆ ಶ್ರೀ ಕಾಳಿಕಾಂಬ ಆಂಜನೇಯ ಕ್ಷೇತ್ರದಲ್ಲಿ 2023ರ ಮಾರ್ಚ್ ತಿಂಗಳಲ್ಲಿ ನಡೆಯಲಿರುವ ಬ್ರಹ್ಮಕಲಶೋತ್ಸವದ ಹಿನ್ನೆಲೆಯಲ್ಲಿ ಕ್ಷೇತ್ರದ ಧರ್ಮದರ್ಶಿ ಶ್ರೀ ಶ್ರೀಕೃಷ್ಣ ಗುರೂಜಿಯವರ ಮಾರ್ಗದರ್ಶನದಲ್ಲಿ ಕಾಸರಗೋಡು ಜಿಲ್ಲೆಯ ಪೆರ್ಲ ಬಳಿಯ ಮಣಿಯಂಪಾರೆಯ ಸಂಟನಡ್ಕದಲ್ಲಿ ವಲಯ ಸಮಿತಿಯ ರಚನೆ ಮಾಡಲಾಯಿತು. ಕ್ಷೇತ್ರದ ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವದ ಯಶಸ್ವಿಗೆ ಸಹಕರಿಸುವಂತೆ ವಲಯ ಸಮಿತಿಯವರು ಸಹಕರಿಸಬೇಕೆಂದು ಕುಕ್ಕಾಜೆ ಕ್ಷೇತ್ರದ ಪರವಾಗಿ ರವಿ ಎಸ್ಎಂ, ಕುಕ್ಕಾಜೆ ವಿನಂತಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಟನಡ್ಕ ದೈವಸ್ಥಾನದ ದೈವದ ಪಾತ್ರಿ ಕರಿಯಪ್ಪ ಪೂಜಾರಿ ವಹಿಸಿದ್ದರು. ಸಂಟನಡ್ಕ ವಲಯ ದಿಂದ ಕ್ಷೇತ್ರದ ಅಭಿವೃದ್ಧಿಯಲ್ಲಿ ಹಾಗೂ ಶ್ರಮದಾನ ಮೂಲಕ ಸಹಕರಿಸುವುದಾಗಿ ಸಂಟನಡ್ಕ ಸೇವಾ ಸಮಿತಿಯ ಕಾರ್ಯದರ್ಶಿ ಉಮೇಶ್ ಪೂಜಾರಿ ಬಳ್ಪರವರು ಭರವಸೆ ನೀಡಿದರು. ಸೊಂಪ ಪೂಜಾರಿ ಶೆಟ್ಟಿಬೈಲು, ಆನಂದ ಪೂಜಾರಿ ಕಿದೂರು, ಹರೀಶ್ ಗೋರಡ್ಕ, ದಿನೇಶ್ ಸಂಟನಡ್ಕ, ‌ಶಶಿಕಾಂತ್ ಕಳತ್ತೂರು ಮೊದಲಾದವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ವಲಯ ಸಮಿತಿಯನ್ನು ರಚಿಸಲಾಯಿತು.
ಗೌರವ ಅಧ್ಯಕ್ಷರುಲಾಗಿ ಸುರೇಶ್ ನಾಯ್ಕ ಕೇದ್ರೊಳಿ, ಅಧ್ಯಕ್ಷರಾಗಿ ಪುರುಷೋತ್ತಮ ಆಲ್ಚಾರ್, ಉಪಾಧ್ಯಕ್ಷರಾಗಿ ಕೇಶವ ನಾಯ್ಕ ಕಲ್ಲಡ್ಕ, ಪ್ರದಾನ ಕಾರ್ಯದರ್ಶಿ ಹರೀಶ್ ಗೋರಡ್ಕ, ಕಾರ್ಯದರ್ಶಿಯಾಗಿ ದಿನೇಶ್ ಸಂಟನಡ್ಕ ಹಾಗೂ ಸುಂದರ ಮಂಗಲ್ಪಾಡಿ, ಕೋಶಾಧಿಕಾರಿ ಶಶಿಕಾಂತ್ ಕಳತ್ತೂರು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ಹಲವರನ್ನು ಆಯ್ಕೆ ಮಾಡಲಾಯಿತು.ಹರೀಶ್ ಸಂಟನಡ್ಕ ಸ್ವಾಗತಿಸಿ ;ಸುಂದರ ಮಂಗಲ್ಪಾಡಿ ವಂದಿಸಿದರು.

LEAVE A REPLY

Please enter your comment!
Please enter your name here