ಪ್ರತಿಭಾ ಕಾರಂಜಿಯಲ್ಲಿ ಸುದಾನ ಶಾಲೆಯ ಶ್ರೀ ವಿಭಾ ಜಿಲ್ಲಾ ಮಟ್ಟಕ್ಕೆ ಆಯ್ಕೆ

0

ಪುತ್ತೂರು : ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢ ಶಾಲೆಯಲ್ಲಿ ಅ.28  ಮತ್ತು 29  ರಂದು ನಡೆದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಸುದಾನ ಆಂಗ್ಲ ಮಾದ್ಯಮ ಶಾಲೆ ನೆಹರುನಗರ ಪುತ್ತೂರು, ಇಲ್ಲಿಯ ಹಿರಿಯ ಪ್ರಾಥಮಿಕ ವಿಭಾಗದ ಏಳನೇ ತರಗತಿಯ ವಿದ್ಯಾರ್ಥಿನಿ ಶ್ರೀವಿಭಾ ಕೆ ಎಸ್, ಭಕ್ತಿಗೀತೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ,  ಮೋನಿಕಾ ಬಿ ವಿ (6) ಕಥೆ ಹೇಳುವಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಹಾಗೂ ಪ್ರೌಢಶಾಲಾ ವಿಭಾಗದ ಅಪೇಕ್ಷಾ ಪೈ (10 ) ತರಗತಿ ಭಾವಗೀತೆ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಗಳಿಸಿರುತ್ತಾರೆ. ಪ್ರಥಮ ಸ್ಥಾನ ಪಡೆದ ಶ್ರೀವಿಭಾ ಕೆ ಎಸ್‌ ರವರು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ ಇವರು ಉರಿಮಜಲು ಇಡ್ಕಿಡು ಗ್ರಾಮದ  ಶ್ರೀಕೃಷ್ಣ ಕೆ  ಹಾಗೂ ಮೀರಾದೇವಿ ಕೆ ದಂಪತಿಗಳ ಪುತ್ರಿಯಾಗಿರುತ್ತಾರೆ.

LEAVE A REPLY

Please enter your comment!
Please enter your name here