ವಿಟ್ಲ ಸೀಮೆ ಪಂಚಲಿಂಗೇಶ್ವರನ ಸನ್ನಿಧಿಯಲ್ಲಿ ಭಜನೋತ್ಸವ

0

ವಿಟ್ಲ: ಭಜನೋತ್ಸವ ಸಮಿತಿ ವಿಟ್ಲ, ಶ್ರೀ ಉಳ್ಳಾಲ್ತಿ ಪಂಚಲಿಂಗೇಶ್ವರ ಭಜನಾ ಪರಿಷತ್ ವಿಟ್ಲ ಸೀಮೆ ಹಾಗೂ ಆರ್. ಕೆ. ಕುಣಿತ ಭಜನಾ ತಂಡ ವಿಟ್ಲ ಇದರ ಸಂಯುಕ್ತ ಆಶ್ರಯದಲ್ಲಿ ಕನಕ ಜಯಂತಿ ಪ್ರಯುಕ್ತ ವಿಶೇಷ ಭಜನೋತ್ಸವ ಕಾರ್ಯಕ್ರಮಕ್ಕೆ ವಿಟ್ಲದ ಉದ್ಯಮಿಗಳಾದ ರಾಧಾಕೃಷ್ಣ ನಾಯಕ್ ರವರು ದೀಪಬೆಳಗಿಸಿ ಚಾಲನೆ ನೀಡಿದರು. ಶ್ರೀ ಪಂಚಲಿಂಗೇಶ್ವರ ದೇವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿ, ಭಜನೋತ್ಸವ ಸಮಿತಿಯ ಅಧ್ಯಕ್ಷರಾದ ಜಗನ್ನಾಥ ಸಾಲಿಯಾನ್, ಭಜನಾ ಪರಿಷತ್ ಅಧ್ಯಕ್ಷರಾದ ಕೃಷ್ಣಯ್ಯ ಕೆ, ಆರ್. ಕೆ ಕುಣಿತ ಭಜನಾ ತಂಡದ ನಿರ್ದೇಶಕ ರಾಜೇಶ್ ವಿಟ್ಲ, ಹಿರಿಯ ಭಜನಾ ಮಾರ್ಗದರ್ಶಕ ಶೀನಪ್ಪ ರೈ ಕೆಲಿಂಜ, ಜಯರಾಮ ಬಲ್ಲಾಳ್, ದಿನೇಶ್ ಪಟ್ಲ, ಮೈತ್ರೆಯಿ ಗುರುಕುಲದ ವ್ಯವಸ್ಥಾಪಕರು ಜಗನ್ನಾಥ ಕಾಸರಗೋಡು, ವಿಶ್ವ ಹಿಂದು ಪರಿಷತ್ ಪುತ್ತೂರು ಜಿಲ್ಲಾ ಸಹಕಾರ್ಯದರ್ಶಿ ಗೋವರ್ಧನ್ ವಿಟ್ಲ, ಜಯರಾಮ ಕುಂಟ್ರಕಲ, ಬಿಲ್ಲವ ಸಂಘ ಬೆಳ್ಳಿ ಹಬ್ಬ ಸಂಭ್ರಮೋತ್ಸವ ಸಮಿತಿ ಅಧ್ಯಕ್ಷ ಡಾ. ಗೀತಪ್ರಕಾಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here