ಕುರಿಯ ಸ.ಉ.ಹಿ.ಪ್ರಾ. ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಸಭೆ: ಪದಾಧಿಕಾರಿಗಳ ಆಯ್ಕೆ

0

ಗೌರವಾಧ್ಯಕ್ಷ :ಪುರುಷೋತ್ತಮ ರೈ, ಅಧ್ಯಕ್ಷ :ರಾಮಕೃಷ್ಣ ಭಂಡಾರಿ, ಪ್ರ.ಕಾರ್ಯದರ್ಶಿ: ಖಲಂದರ್ ಮುಸ್ತಫಾ, ಖಜಾಂಜಿ : ಸಮೀರ್

ಕುರಿಯ: ಕುರಿಯ ಹಿ.ಪ್ರಾ.ಶಾಲಾ ಹಿರಿಯ ವಿದ್ಯಾರ್ಥಿಗಳ ಸಭೆ ನಡೆಯಿತು. ಶಾಲಾ ಅಭಿವೃದ್ದಿ ಸಮಿತಿ ಅಧ್ಯಕ್ಷ ಜಬ್ಬಾರ್ ಅಧ್ಯಕ್ಷತೆ ವಹಿಸಿದ್ದರು. ಕುರಿಯ ಶಾಲಾ ಹಿರಿಯ ವಿದ್ಯಾರ್ಥಿ ಸಂಘಕ್ಕೆ ವಿವೇಕಾನಂದ ಹಿರಿಯ ವಿದ್ಯಾರ್ಥಿ ಸಂಘವೆಂದು ನಾಮಕರಣ ಮಾಡಲಾಯಿತು. ಸಭೆಯಲ್ಲಿ ನೂತನ ಸಮಿತಿಯನ್ನು ರಚಿಸಲಾಯಿತು. ಗೌರವಾಧ್ಯಕ್ಷರಾಗಿ ಆರ‍್ಯಾಪು ಗ್ರಾ.ಪಂ. ಸದಸ್ಯ ಬೂಡಿಯಾರು ಪುರುಷೋತ್ತಮ ರೈ, ಅಧ್ಯಕ್ಷರಾಗಿ ರಾಮಕೃಷ್ಣ ಭಂಡಾರಿ ಡಿಂಬ್ರಿಗುತ್ತು, ಪ್ರಧಾನ ಕಾರ್ಯದರ್ಶಿಯಾಗಿ ಖಲಂದರ್ ಮುಸ್ತಫ ಕೆ. ಕುರಿಯ, ಖಜಾಂಜಿಯಾಗಿ ಸಮೀರ್ ಎ. ಕುರಿಯರವರನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಯಾಕೂಬ್ ಕುರಿಯ, ಸಹಕಾರ್ಯದರ್ಶಿಯಾಗಿ ಆಸೀಫ್ ಎ.ಆರ್ ಕುರಿಯ ಮತ್ತು ಮೊಹಮ್ಮದ್ ಅಶ್ರಫ್ ಕುರಿಯ, ಸಂಘಟನಾ ಕಾರ್ಯದರ್ಶಿಯಾಗಿ ಜುಬೈದ ಕೆ. ಕುರಿಯ ಮತ್ತು ಫಾತಿಮತ್ ನಮೀಝಾ ಪಂಜಳ, ಸಂಚಾಲಕರಾಗಿ ಉಸ್ಮಾನ್ ಎ., ಮುಸ್ತಫ ಎ., ಅಬೂಬಕ್ಕರ್ ಕೆ., ಬುಶ್ರಾ (ತಶ್‌ರೀಫ್), ಹುಸೈನಾರ್, ಸಫ್ರೀನಾ, ರಾಜೇಶ್ ಕುಮಾರ್ ರೈ ಬಳ್ಳಮಜಲು, ಎಂ.ಐ ಅಬ್ದುಲ್ ಹಮೀದ್, ಮಹಮ್ಮದ್ ಎ., ಜತ್ತಪ್ಪ ಪೂಜಾರಿ ಬಳ್ಳಮಜಲುರವರನ್ನು ಆಯ್ಕೆ ಮಾಡಲಾಯಿತು. ಪಂಚಾಯತ್ ಸದಸ್ಯ ಹಾಗೂ ಶಾಲಾಭಿವೃದ್ಧಿ ಸಮಿತಿಯ ನಾಮನಿರ್ದೇಶಿತ ಸದಸ್ಯ ಬೂಡಿಯಾರು ಪುರುಷೋತ್ತಮ ರೈ, ಪಂಚಾಯತ್ ಸದಸ್ಯರಾದ ಕಲಾವತಿ, ಯಾಕೂಬ್ ಉಪಸ್ಥಿತರಿದ್ದರು. ಶಾಲಾ ಹಿರಿಯ ಶಿಕ್ಷಕಿ ಪ್ರೇಮ ಸ್ವಾಗತಿಸಿ ವಂದಿಸಿದರು. 150ಕ್ಕೂ ಮಿಕ್ಕಿ ಹಿರಿಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here