ಒಳಿತು ಮಾಡು ಮನುಷ ತಂಡದಿಂದ ಸಹಾಯನಿಧಿ ಯೋಜನೆಯ ಚೆಕ್ ವಿತರಣೆ

0

ಪುತ್ತೂರು:ಮಲವಿಸರ್ಜನೆ ಮಾಡುವ ಅಂಗ ಮತ್ತು ಮೂತ್ರಕೋಶದ ಸಮಸ್ಯೆಯಿಂದ ಬಳಲುತ್ತಿರುವ ಬಂಟ್ವಾಳ ತಾಲೂಕಿನ ಮೇಗಿನ ಕೂರಿಯಾಳ ಸದಾಶಿವ ಆಚಾರ್ಯ ಮತ್ತು ಜಯಶೀಲ ದಂಪತಿಯ 1 ವರ್ಷ 9 ತಿಂಗಳ ಗಂಡು ಮಗು ಸಮಿತ್‌ರವರಿಗೆ ವಿಷನ್ ಸಹಾಯ ನಿಧಿ ಸೇವಾ ಟ್ರಸ್ಟ್‌ನ ಒಳಿತು ಮಾಡು ಮನುಷ ತಂಡದ 39ನೇ ಯೋಜನೆಯಾಗಿ 15,000 ರೂ.ನ ಚೆಕ್ ವಿತರಿಸಿದರು.

 ಮತ್ತು ಆಕಸ್ಮಿಕವಾಗಿ ಕುಸಿದು ಬಿದ್ದು ಸ್ಟ್ರೋಕ್ ಆಗಿ ಮಂಗಳೂರಿನ ಫಾಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಲ್ಲುಗುಂಡಿಯಲ್ಲಿ ರಿಕ್ಷಾ ಚಾಲಕರಾಗಿ ದುಡಿಯುತಿದ್ದ ಹೇಮನಾಥರವರಿಗೆ 40ನೇ ಯೋಜನೆಯಾಗಿ ರೂ.10,000 ದ ಚೆಕ್‌ನ್ನು ಪುತ್ತೂರು ಮಹಾಲಿಗೇಶ್ವರ ದೇವಸ್ತಾನದ ವಠಾರದಲ್ಲಿ ಕೇಶವ ಪ್ರಸಾದ್ ಮುಳಿಯರವರು ಹಸ್ತಾಂತರ ಮಾಡಿದರು.

ಸಂಸ್ಥೆಯ ಹಿತೈಸಿಗಳಾದ ರಾಜೇಶ್ ಬನ್ನೂರು, ಮೋನಪ್ಪ ಗೌಡ, ಕೃಷ್ಣಪ್ಪ ಶಿವನಗರ ಹಾಗೂ ಟ್ರಸ್ಟ್ ನ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here