ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ತೆಂಕಿಲದ ವಿದ್ಯಾರ್ಥಿಗಳಿಗೆ  ಜಿಲ್ಲಾ ಮಟ್ಟದಲ್ಲಿ ಬಹುಮಾನ

0

ಪುತ್ತೂರು: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಛೇರಿ ಕಾರ್ಮೆಲ್ ಕಾನ್ವೆಂಟ್ ಮಾಡಂಕಾಪು, ಬಂಟ್ವಾಳ ತಾಲೂಕು ಇಲ್ಲಿ  10 ನವೆಂಬರ್ 2022ರಂದು ನಡೆದ  ಜಿಲ್ಲಾ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನ ಗುಂಪು ಸ್ಪರ್ಧೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಹತ್ತನೇ ತರಗತಿಯ ವಿದ್ಯಾರ್ಥಿಗಳಾದ  ಅನ್ವಿತ್ ಯನ್  (  ಶ್ರೀಪತಿ ಎನ್ ಮತ್ತು   ವಿದ್ಯಾಲಕ್ಷ್ಮಿ ದಂಪತಿ ಪುತ್ರ) ಹಾಗೂ ಸಮರ್ಥ ರಾಮ ರೈ (  ಸತೀಶ್ ಕುಮಾರ್ ರೈ ಮತ್ತು ಪ್ರಗತಿ ರೈ ದಂಪತಿ ಪುತ್ರ ) ಇವರ ತಂಡ ಭಾಗವಹಿಸಿ ತೃತೀಯ ಸ್ಥಾನ ಪಡೆದುಕೊಂಡಿರುತ್ತಾರೆ ಎಂದು ಮುಖ್ಯೋಪಾಧ್ಯಾಯರಾದ  ಸತೀಶ್ ಕುಮಾರ್ ರೈ ಅವರು ಶಾಲಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

LEAVE A REPLY

Please enter your comment!
Please enter your name here