ಬದುಕು ಬರಡಾದ ಕೂಲಿ ಕಾರ್ಮಿಕನ ಕುಟುಂಬ: ವೈದ್ಯಕೀಯ ಚಿಕಿತ್ಸೆಗೆ ದಾನಿಗಳ ನೆರವು ಯಾಚನೆ

0

ಪುತ್ತೂರು:ಬನ್ನೂರು ಗ್ರಾಮದ ಆನೆಮಜಲು ನಿವಾಸಿಯಾಗಿರುವ ಸುಮಾರು 45 ವರ್ಷ ಪ್ರಾಯದ ಗುರುವಪ್ಪ (ಬಾಳು) ಎಂಬ ಕೂಲಿ ಕಾರ್ಮಿಕ ಅನಾರೋಗ್ಯದಿಂದ ಬಳಲುತ್ತಿದ್ದಾರೆ.ಮನೆಗೆ ಆಧಾರವಾಗಿದ್ದ ವ್ಯಕ್ತಿ ಹಾಸಿಗೆ ಹಿಡಿದ ಮೇಲೆ ಜೀವನವೆಂಬ ಚಕ್ಕಡಿ ಚಕ್ರವೊಂದು ಮುರಿದು ಬಿದ್ದಂತಾಗಿದೆ.ಬಾಯಿ ಕ್ಯಾನ್ಸರ್ ರೋಗ ಕಾಯಿಲೆಯಿಂದ ಬಳಲುತ್ತಿರುವ ಇವರ ಚಿಕಿತ್ಸೆಗೆ ಸುಮಾರು ರೂ.3 ಲಕ್ಷದಷ್ಟು ಬೇಕಾಗಿದೆ.ಆರ್ಥಿಕವಾಗಿ ತೀರಾ ಸಂಕಷ್ಟದಲ್ಲಿರುವ ಕುಟುಂಬಕ್ಕೆ ಇದನ್ನು ಹೊಂದಿಸಿಕೊಳ್ಳಲು ಸಾಧ್ಯವಿಲ್ಲವಾಗಿರುವುದರಿಂದ ಅವರ ಪತ್ನಿ ಸುಶೀಲ ಅವರು ನೆರವಿಗಾಗಿ ದಾನಿಗಳಿಗೆ ಮನವಿ ಮಾಡಿದ್ದಾರೆ.

ಮನೆಗೆ ಗುರುವಪ್ಪ ಅವರೇ ಆಧಾರ.ದುಡಿಯುವ ಸಂದರ್ಭ ಬಾಯಿ ಕ್ಯಾನ್ಸರ್‌ಗೆ ತುತ್ತಾಗಿದ್ದರು.ಇದೀಗ ಚಿಕಿತ್ಸೆಗಾಗಿ ‘ಯಾರಾದ್ರೂ ಸಹಾಯ ಮಾಡಿ’ ಅಂತ ಕಣ್ಣೀರಿಡುತ್ತಿದೆ ನೊಂದ ಕುಟುಂಬ. ಕೂಲಿ ಕೆಲಸದಿಂದ ನಿತ್ಯ ಜೀವನ ನಡೆಸುತ್ತಿದ್ದ, ಸಣ್ಣ ವಯಸ್ಸಿನಲ್ಲಿಯೇ ಅನಾರೋಗ್ಯದಿಂದ ನರಳುತ್ತಿದ್ದು, ಪುತ್ತೂರು ಆಸ್ಪತ್ರೆಯಿಂದ ಮಂಗಳೂರು ಆಸ್ಪತ್ರೆಗೆ ಕರೆದುಕೊಂಡು ಹೋಗಲೂ ಬಿಡಿ ಕಾಸಿಲ್ಲದಂತಾಗಿದೆ.ಈ ಕುಟುಂಬದ ಪರಸ್ಥಿತಿ ನೋಡಿ ಸ್ಥಳಿಯರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.ಯಾರಾದ್ರೂ ದಾನಿಗಳು, ಸಂಘಸಂಸ್ಥೆಯವರು ಸಹಾಯ ಮಾಡುವಂತೆ ಗುರುವಪ್ಪ ಅವರ ಪತ್ನಿ ಸುಶೀಲ ಅವರು ಮನವಿ ಮಾಡಿದ್ದಾರೆ.ಸಹಾಯ ಮಾಡುವವರು ಸುಶೀಲ ಆನೆಮಜಲು ಅವರ ಹೆಸರಲ್ಲಿರುವ, ಕೆನರಾ ಬ್ಯಾಂಕ್ ಖಾತೆ ಸಂಖೆ 01342250018054ಗೆ ಆರ್ಥಿಕ ನೆರವು ನೀಡುವಂತೆ ಮನವಿ ಮಾಡಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 9148531589ಸಂಪರ್ಕಿಸಬಹುದು.

 

LEAVE A REPLY

Please enter your comment!
Please enter your name here