ವೀರ ಪುರುಷ/ನಾರಿಯರ ಪಾತ್ರಾಭಿನಯ ಸ್ಪರ್ಧೆಯಲ್ಲಿ ವಿಕ್ಟರ್ ಪ್ರೌಢಶಾಲೆಯ ಅಪೂರ್ವ ಪ್ರಥಮ

0

ಪುತ್ತೂರು: ಶ್ರೀ ಆಲೂರು ವೆಂಕಟರಾವ್ ಭಾಷಾ ಕೌಶಲ ತರಬೇತಿ ಕೇಂದ್ರಗಳ ವತಿಯಿಂದ ತುಳು ಸಿರಿ ಶೀರ್ಷಿಕೆಯಲ್ಲಿ ತಾಲೂಕು ಮಟ್ಟದ ಮತ್ತು ಜಿಲ್ಲಾ ಮಟ್ಟದಲ್ಲಿ ನಡೆದ ತುಳು ನಾಡಿನ ಚಾರಿತ್ರಿಕ ವೀರ ಪುರುಷ / ನಾರಿಯರ ಪಾತ್ರಾಭಿನಯ ಸ್ಪರ್ಧೆಯಲ್ಲಿ ಮಾಯಿದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಸಂತ ವಿಕ್ಟರ್ ಬಾಲಿಕಾ ಪ್ರೌಢ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿನಿಯಾದ ಕು|ಅಪೂರ್ವ(ಶಶಿಧರ್ ಹಾಗೂ ಶ್ರೀಮತಿ ಹೇಮಾವತಿರವರ ಪುತ್ರಿ) ಇವರು ಪ್ರಥಮ ಸ್ಥಾನವನ್ನು ಪಡೆದಿದ್ದಾರೆ ಎಂದು ಮುಖ್ಯಶಿಕ್ಷಕಿ ಶ್ರೀಮತಿ ರೋಸ್‌ಲಿನ್ ಲೋಬೋರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here