ಉಪ್ಪಿನಂಗಡಿ:ಎಟಿಎಂ ಹಣ  ಸಾಗಿಸುವ ವಾಹನ ಡಿಕ್ಕಿಯಾಗಿ ಆಟೋ ಚಾಲಕನ ದುರಂತ ಸಾವು

0

ಉಪ್ಪಿನಂಗಡಿ ಆಟೋ ರಿಕ್ಷಾ ಹಾಗೂ ಎಟಿಎಂ ಹಣ  ಸಾಗಿಸುವ ವಾಹನ ಡಿಕ್ಕಿಯಾಗಿ ರಿಕ್ಷಾ ಚಾಲಕ ಸ್ಥಳದಲ್ಲಿಯೇ ಮೃತಪಟ್ಟ  ಘಟನೆ 34 ನೆಕ್ಕಿಲಾಡಿ ಗ್ರಾಮದ ಬೊಳ್ಳಾರು ಎಂಬಲ್ಲಿ  ಇಂದು(ನ.29)  ಸಂಜೆ ನಡೆದಿದೆ.

ಸುಭಾಷ್ ನಗರದ ವಾಸು ಪೂಜಾರಿ (52) ಮೃತ ದುರ್ಧೈವಿ‌, ಈ  ಹಿಂದೆ ಟೆಂಪೋ ಚಾಲಕರಾಗಿದ್ದ ಅವರು ಆನಂತರ ಅಟೋ ರಿಕ್ಷಾದಲ್ಲಿ ದುಡಿಯುತ್ತಿದ್ದರು. ಉಪ್ಪಿನಂಗಡಿ ಕಡೆಗೆ ಆಟೋ ರಿಕ್ಷಾದಲ್ಲಿ  ಬರುತ್ತಿರುವ ಸಂದರ್ಭ ಉಪ್ಪಿನಂಗಡಿಯಿಂದ  ಬಿಸಿರೋಡ್‌  ಕಡೆಗೆ ಹೋಗುತ್ತಿದ್ದ ಎಟಿಎಮ್‌  ಹಣ ಸಾಗಟ ವಾಹನ ಇವರ ರಿಕ್ಷಾಕ್ಕೆ ಡಿಕ್ಕಿಯಾಗಿದೆ.

 ಸ್ಥಳಕ್ಕೆ ಉಪ್ಪಿನಂಗಡಿ ಪೊಲೀಸ್‌ ಠಾಣಾ ಇಲಾಖೆಯ ಪೊಲೀಸ್ ಆಗಮಿಸಿ ಪ್ರಕರಣ ದಾಖಲಿಸಿಕೊಂಡು. ಪರಿಶೀಲನೆ ನಡೆಸಿದ್ದಾರೆ.

LEAVE A REPLY

Please enter your comment!
Please enter your name here