ಮಿತ್ತೂರು-ಕೋಲ್ಪೆ ರಸ್ತೆ ಕಾಮಗಾರಿಗೆ ಪುತ್ತೂರು ಶಾಸಕರಿಂದ ಶಿಲಾನ್ಯಾಸ

0

ವಿಟ್ಲ: ಬಂಟ್ವಾಳ ತಾಲೂಕು ಇಡ್ಕಿದು ಗ್ರಾಮ ಪಂಚಾಯತ್ ವ್ಯಾಪ್ತಿಯ ಮಿತ್ತೂರು – ಕೋಲ್ಪೆ ರಸ್ತೆಗೆ 70 ಲಕ್ಷ ರೂಪಾಯಿಗಳ ವಿಶೇಷ ಅನುದಾನದ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ ಸಂಜೀವ ಮಠಂದೂರುರವರು ಶಿಲಾನ್ಯಾಸ ನೆರವೇರಿಸಿದರು.

ಈ ಸಂದರ್ಭದಲ್ಲಿ ಕ್ಯಾಂಪ್ಕೋ ಸಂಸ್ಥೆಯ ಮಾಜಿ ಅಧ್ಯಕ್ಷರಾದ ಕೊಂಕೋಡಿ ಪದ್ಮನಾಭ. ಕೋಲ್ಪೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಕೆ. ಎಸ್. ಸುರೇಶ್ ಮುಕ್ಕುಡ, ಇಡ್ಕಿದು ಸೇವಾ ಸಹಕಾರಿ ಸಂಘದ ಮಾಜಿ ಅಧ್ಯಕ್ಷರಾದ ಗೋಪಾಲಕೃಷ್ಣ ಭಟ್ ಬೈಪದವು, ಸೂರ್ಯ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಈಶ್ವರ ಗೌಡ, ಪುತ್ತೂರು ಬಿಜೆಪಿ ಗ್ರಾಮಾಂತರ ಮಂಡಲದ ಕೋಶಾಧಿಕಾರಿ ರಮೇಶ್ ಭಟ್ ಎಂ. ಎಚ್., ಎ.ಪಿ.ಎಂ.ಸಿ ಯ ಮಾಜಿ ಸದಸ್ಯರಾದ ಜಗದೀಶ್ ದೇವಸ್ಯ, ಇಡ್ಕಿದು ಗ್ರಾಮ ಪಂಚಾಯತ್ ಸದಸ್ಯರಾದ ಭಾಗೀರಥಿ, ಪದ್ಮನಾಭ, ಪುಷ್ಪ, ಸಂಜೀವ ದರ್ಬೆ, ಪುರುಷೋತ್ತಮ ಕೋಲ್ಪೆ, ಚಿದಾನಂದ ಪೆಲತ್ತಿಂಜ, ಮಾಜಿ ಪಂಚಾಯತ್ ಸದಸ್ಯರಾದ ಸತೀಶ್, ವಕೀಲರಾದ ಪ್ರದೀಪ್ ಕುಮಾರ್, ಈಶ್ವರ ಗೌಡ ಕುವೆತ್ತಿಲ, ಜಯಂತ ಗೌಡ ಸೂರ್ಯ, ಕಿರಣ್ ಕುಮಾರ್ ಕೋಲ್ಪೆ, ಕೃಷ್ಣ ಬಂಗೇರ, ಸದಾಶಿವ ಶೆಟ್ಟಿಗಾರ್, ಹರಿಕೃಷ್ಣ ಭಟ್, ವೆಂಕಟರಮಣ ಭಟ್ ದರ್ಬೆ, ಶ್ರೀರಂಗ ಭಟ್, ವಸಂತ ಪೂಜಾರಿ, ಜಗದೀಶ್ ಸೂರ್ಯ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗೋಕುಲ್ ದಾಸ್ ಭಕ್ತ, ಗುತ್ತಿಗೆದಾರ ತಿಲಕ್ ಮತ್ತಿತರರು ಉಪಸ್ಥಿತರಿದ್ದರು.

ಇಡ್ಕಿದು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಎಂ. ಸುಧೀರ್ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here