ಶ್ರೀಧರ್ ಹಂದ್ರಟ್ಟ ನಿವೃತ್ತಿ

0

ಪುತ್ತೂರು: ಸಾಲ್ಮರ ಸಮೀಪದ ಹಂದ್ರಟ್ಟ ನಿವಾಸಿ ಶ್ರೀಧರ್‌ ಹಂದ್ರಟ್ಟ ಅವರು ಮಣಿಪಾಲ್ ಇನ್ಸ್ಟಿಟ್ಯೂಷನ್‌ ಆಫ್‌ ಟೆಕ್ನಾಲಜಿಯಲ್ಲಿ ಫಿಸಿಕಲ್‌ ಎಜುಕೇಶನ್‌ ನಿರ್ದೆಶಕರಾಗಿ ಸುಮಾರು 32 ವರ್ಷ ಸೇವೆ ಸಲ್ಲಿಸಿ ನ.30ರಂದು ನಿವೃತ್ತರಾಗಿದ್ದಾರೆ.ಕಚೇರಿಯಲ್ಲಿ ಇವರಿಗೆ ಬೀಲ್ಕೊಡುಗೆ ಸಮಾರಂಭ ಏರ್ಪಡಿಸಿ ಗೌರವಾರ್ಪಣೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಸಂಸ್ಥೆಯ ಜಂಟಿ ನಿರ್ದೇಶಕ ಡಾ. ಸೋಮಶೇಖರ ಭಟ್‌ ಮತ್ತು ಸಂಸ್ಥೆಯ ನಿರ್ದೇಶಕರಾದ ಕಮಾಂಡರ್‌ ಅನಿಲ್‌ ರಾಣಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ದಿ. ಮಹಾಲಿಂಗ ಹಂದ್ರಟ್ಟ ಹಾಗೂ ದಿ. ಪರಮೇಶ್ವರಿ ದಂಪತಿಯ ಪುತ್ರರಾದ ಇವರು ಕೆನರಾ ಬ್ಯಾಂಕ್‌ ಮಣಿಪಾಲ್‌ ಶಾಖೆಯಲ್ಲಿ ಆಫಿಸರ್‌ ಆಗಿರುವ ಶಾಲಿನಿ ಶ್ರೀಧರ್‌ ಹಾಗೂ ಬೆಂಗಳೂರಿನ ಸಿಜಿಐ ಕಂಪನಿಯಲ್ಲಿ ಸಾಪ್ಟ್‌ ವೇರ್‌ ಇಂಜೀನಿಯರ್‌ ಆಗಿರುವ ಶರಣ್ಯ ಇವರೊಂದಿಗೆ ಮಣಿಪಾಲದಲ್ಲಿ ವಾಸವಾಗಿದ್ದಾರೆ.

LEAVE A REPLY

Please enter your comment!
Please enter your name here