ಬಿರುಮಲೆ ಬೆಟ್ಟ ಅಭಿವೃದ್ಧಿ ಯೋಜನೆಯ ಕಾರ್ಯಕಾರಿ ಸಮಿತಿಯ ಸಾಮಾನ್ಯ ಸಭೆ

0

ಪುತ್ತೂರು:ಬಿರುಮಲೆ ಬೆಟ್ಟ ಅಭಿವೃದ್ಧಿ ಯೋಜನೆಯ ಕಾರ್ಯಕಾರಿ ಸಮಿತಿಯ ಸಾಮಾನ್ಯ ಸಭೆಯು ಡಿ.7 ರಂದು ಬಿರುಮಲೆ ಉದ್ಯಾನವನದ ಸಭಾಂಗಣದಲ್ಲಿ ಜರಗಿತು.

ಸಮಿತಿಯ ಅಧ್ಯಕ್ಷ ಎ.ಜಗಜ್ಜೀವನ್ ದಾಸ್ ರೈಯವರು ಸ್ವಾಗತಿಸಿ, ಸಭೆಯ ಕಾರ್ಯಕಲಾಪಗಳ ಬಗ್ಗೆ ಮಾಹಿತಿ ನೀಡಿದರು. ನಗರಸಭೆಯ ಪ್ರಾಸ್ತಾವಿಕ ಉದ್ಯಾನವನ, ಜನವರಿ ತಿಂಗಳಿನಲ್ಲಿ ಆಯೋಜಿಸುವ ಬಿರುಮಲೋತ್ಸವ, ಸದಸ್ಯತನದ ನವೀಕರಣ ಹಾಗೂ ಆರ್ಥಿಕ ಅಭಿವೃದ್ಧಿ ವಿಚಾರ ಮತ್ತು ಗಾಂಧಿ ಮಂಟಪದ ನವೀಕರಣದ ಬಗ್ಗೆ ಸಭೆಯಲ್ಲಿ ವಿಚಾರ-ವಿನಿಮಯ ನಡೆಯಿತು. ಸದಸ್ಯರುಗಳಾದ ಎಂ.ಎಸ್ ಅಮ್ಮಣ್ಣಾಯ, ನಿತಿನ್ ಪಕ್ಕಳ, ಡಾ.ರವೀಂದ್ರ, ಸಂತೋಷ್ ಶೆಟ್ಟಿ, ಪ್ರೊ|ಝೇವೀಯರ್ ಡಿ’ಸೋಜ, ಶಾಂತ ಕುಮಾರ್, ಸೂರ್ಯನಾಥ ಆಳ್ವರವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here