ಇಂದು(ಡಿ.10): ನಿಡ್ಪಳ್ಳಿ ಮಂದಾರಗಿರಿ ಶ್ರೀ ಗೋಪಾಲಕೃಷ್ಣ ಭಜನಾ ಮಂದಿರದ ವಾರ್ಷಿಕೋತ್ಸವ ಕಾರ್ಯಕ್ರಮ.

0
ನಿಡ್ಪಳ್ಳಿ; ಶ್ರೀ ಗೋಪಾಲಕೃಷ್ಣ ಭಜನಾ ಮಂದಿರ ಮಂದಾರಗಿರಿ, ನಿಡ್ಪಳ್ಳಿ ಇದರ 6 ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮ ವೇದಮೂರ್ತಿ ಕಕ್ಕೂರು ರಾಧಾಕೃಷ್ಣ ಭಟ್ ಇವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಕಾರ್ಯಕ್ರಮಗಳು; ಸಾಯಂಕಾಲ ಗಂಟೆ 4 ರಿಂದ ವಿವಿಧ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ.
ಸಂಜೆ ಗಂಟೆ 5 ರಿಂದ ಶ್ರೀ ಸತ್ಯನಾರಾಯಣ ಪೂಜೆ.ರಾತ್ರಿ ಗಂಟೆ 8 ಕ್ಕೆ ಮಹಾ ಮಂಗಳಾರತಿ.ಗಂಟೆ 8.30 ಕ್ಕೆ ಧಾರ್ಮಿಕ ಸಭೆ ನಂತರ ಪ್ರಸಾದ ವಿತರಣೆ, ಅನ್ನಸಂತರ್ಪಣೆ. ರಾತ್ರಿ ಗಂಟೆ 10 ರಿಂದ ಪಡ್ರೆ ಚಂದು ಸ್ಮಾರಕ ಯಕ್ಷಗಾನ ನಾಟ್ಯ ತರಬೇತಿ ಕೇಂದ್ರ ಪೆರ್ಲ ಇದರ ಶಿಷ್ಯರಿಂದ ಯಕ್ಷಗಾನ ” ಶ್ರೀ ಕೃಷ್ಣ ಲೀಲೆ- ಕಂಸವಧೆ ” ನಡೆಯಲಿದೆ ಎಂದು ಮಂದಿರದ ಪದಾಧಿಕಾರಿಗಳು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here