ಕುತ್ಯಾಡಿ ಚಿಕ್ಕಪ್ಪ ರೈ ಸ್ಮರಣಾರ್ಥವಾಗಿ ಬಸ್ಸ್ ತಂಗುದಾಣ ಉದ್ಘಾಟನೆ

0

ಪುತ್ತೂರು: ಕುತ್ಯಾಡಿ ಚಿಕ್ಕಪ್ಪ ರೈ ಯವರ ಸ್ಮರಣಾರ್ಥವಾಗಿ  ಅರಿಯಡ್ಕ ಪಾಪೆಮಜಲು ಹೊಸಗದ್ದೆಯಲ್ಲಿ ಚಂದ್ರಾವತಿ ಚಿಕ್ಕಪ್ಪ ರೈ ಮತ್ತು ಮಕ್ಕಳು ನೀಡಿರುವ ಬಸ್ಸು ತಂಗುದಾಣದ ಉದ್ಘಾಟನೆ ಡಿ. 13 ರಂದು ಅರಿಯಡ್ಕ ಚಿಕ್ಕಪ್ಪ ನಾಯ್ಕ್ ರವರು ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿದರು.

ಚಂದ್ರಾವತಿ ಮತ್ತು ಮಕ್ಕಳು ದೀಪ ಬೆಳಗಿಸಿದರು. ಕಾರ್ಯಕ್ರಮದಲ್ಲಿ ಅರಿಯಡ್ಕ ಗ್ರಾಮ ಪಂಚಾಯತ್ ವತಿಯಿಂದ ಅಧ್ಯಕ್ಷೆ ಸೌಮ್ಯ ಬಾಲಸುಬ್ರಮಣ್ಯರವರು ಚಂದ್ರಾವತಿ ಅವರಿಗೆ ಅಭಿನಂದನಾ ಪತ್ರವನ್ನು ನೀಡಿದರು. ಅರಿಯಡ್ಕ ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಎಸ್. ಇಕ್ಬಾಲ್ ಹುಸೈನ ಪ್ರಸ್ತಾವಿಕವಾಗಿ ಮಾತನಾಡಿದರು. 

ಕಾರ್ಯಾಕ್ರಮದಲ್ಲಿ ಪಿಡಿಒ ಪದ್ಮಕುಮಾರಿ, ಚಂದ್ರಾವತಿ ಮತ್ತು ಮಕ್ಕಳು, ಅಳಿಯಂದಿರು, ಸೊಸೆಯಂದಿರು ಮತ್ತು ಕುಟುಂಬಸ್ಥರು ಡಿ. ಅಮ್ಮಣ್ಣ ರೈ ಪಾಪೆಮಜಲು, ಶಾಂತರಾಮ ರೈ ಮಡ್ಯಂಗಳ, ನಾರಾಯಣರು ಮಡ್ಯಂಗಳ, ಇಸ್ಮಾಯಿಲ್ ಹಾಜಿ ಕೌಡಿಚ್ಚಾರು, ಅಶೋಕ್ ರೈ ಪಾನಿಪುರಿ ಹೊಸಗದ್ದೆ, ರಾಜೀವ ರೈ ಕುತ್ಯಾಡಿ ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು. ಅರಿಯಡ್ಕ ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಎಸ್. ಇಕ್ಬಾಲ್ ಹುಸೈನ ಸ್ವಾಗತಿಸಿ,ಗ್ರಾಮ ಪಂಚಯಾತ್ ಉಪಾಧ್ಯಾಕ್ಷ ಸಂತೋಷ್ ಮಯಾ  ವಂದಿಸಿದರು.

LEAVE A REPLY

Please enter your comment!
Please enter your name here