ಉಪ್ಪಿನಂಗಡಿ ಜೇಸಿಐ ಘಟಕದ ಪದಪ್ರದಾನ

0

ಉಪ್ಪಿನಂಗಡಿ: ಜೇಸಿಐ ಉಪ್ಪಿನಂಗಡಿ ಘಟಕದ 45 ನೇ ವರ್ಷದ ಪದಪ್ರದಾನ ಕಾರ್ಯಕ್ರಮ ಉಪ್ಪಿನಂಗಡಿಯ ರೋಟರಿ ಭವನದಲ್ಲಿ ನಡೆಯಿತು.


ಮುಖ್ಯ ಅತಿಥಿಯಾಗಿ ಭಾಗವಹಿಸಿದ ವಲಯಾಧ್ಯಕ್ಷ ಪುರುಷೋತ್ತಮ ಶೆಟ್ಟಿ ಮಾತನಾಡಿ, ಯುವಜನತೆಯ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗುವ ವೇದಿಕೆಯನ್ನು ಜೇಸಿಐ ಕಲ್ಪಿಸುತ್ತದೆ ಎಂದರು.


ಉಪ್ಪಿನಂಗಡಿ ಘಟಕದ ನೂತನ ಅಧ್ಯಕ್ಷ ಶೇಖರ್ ಗೌಂಡತ್ತಿಗೆ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಜೇಸಿಐಯ ಡಾ. ರಾಜಾರಾಮ್ ಕೆ.ಬಿ., ವಲಯ ಪೂರ್ವಾಧ್ಯಕ್ಷರಾದ ಅಶೋಕ್ ಚೂಂತಾರು, ವಿನೀತ್, ಪ್ರಜ್ವಲ್ ರೈ, ನಂದಕುಮಾರ್, ವಲಯಾಧಿಕಾರಿ ಪ್ರದೀಪ್ ಬಾಕಿಲ, ನಿಕಟಪೂರ್ವ ಅಧ್ಯಕ್ಷ ಕೆ.ವಿ.ಕುಲಾಲ್, ಉಪ್ಪಿನಂಗಡಿ ಗ್ರಾಮ ಪಂಚಾಯತ್ ಸದಸ್ಯ ಸುರೇಶ್ ಅತ್ರಮಜಲು, ಉಪ್ಪಿನಂಗಡಿ ಸಿ.ಎ. ಬ್ಯಾಂಕಿನ ಮಾಜಿ ನಿರ್ದೇಶಕ ಅಜೀಜ್ ಬಸ್ತಿಕಾರ್, ನೆಲ್ಯಾಡಿ ಕಾಮಧೇನು ಸಹಕಾರ ಸಂಘದ ಅಧ್ಯಕ್ಷೆ ಉಷಾ ಅಂಚನ್, ಪುತ್ತೂರು ತಾಲೂಕು ಲ್ಯಾಂಪ್ಸ್ ಸಹಕಾರ ಸಂಘದ ಉಪಾಧ್ಯಕ್ಷ ಧರ್ಣಪ್ಪ ನಾಯ್ಕ, ಪೆರಿಯಡ್ಕ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರದ ಅಧ್ಯಕ್ಷ ಸುರೇಶ್ ಗೌಂಡತ್ತಿಗೆ, ಆರ್ತಿಲ ಆದಿಶಕ್ತಿ ಗೆಳೆಯರ ಬಳಗದ ಮಾಜಿ ಅಧ್ಯಕ್ಷ ಉದಯ, ಉಪ್ಪಿನಂಗಡಿ ಯುವವಾಹಿನಿಯ ಅಧ್ಯಕ್ಷ ಕುಶಾಲಪ್ಪ ಹತ್ತು ಕಲಸೆ, ಕಾಂಚನ ವಿಕ್ರಮ ಮಂಡಲದ ಅಧ್ಯಕ್ಷ ಅನೀಲ್ ಪಿಂಟೊ, ಉಪಾಧ್ಯಕ್ಷ ಸಚಿನ್ ಮುದ್ಯ, ತಾ.ಪಂ. ಮಾಜಿ ಸದಸ್ಯ ಉಮೇಶ್ ಶೆಣೈ, ಜೇಸಿಐಯ ಶ್ರೀಧರ್, ಜಯಂತಿ, ಶಶಿರಾಜ್, ಲಕ್ಷ್ಮೀನಾರಾಯಣ, ನವೀನ್ ಕುಮಾರ್, ಧನುಶ್ರೀ, ವಿಜಯಕುಮಾರ್ ಕಲ್ಲಳಿಕೆ, ರವೀಂದ್ರ ದರ್ಬೆ, ಪ್ರಶಾಂತ್ ಕುಮಾರ್ ರಯ, ಕೇಶವ ರಂಗಾಜೆ, ಉಮೇಶ್ ಆಚಾರ್ಯ, ಪುಷ್ಪರಾಜ್ ಶೆಟ್ಟಿ, ಶಶಿಧರ ನೆಕ್ಕಿಲಾಡಿ, ಮೋನಪ್ಪ ಪಮ್ಮನಮಜಲು, ಡಾ. ನಿರಂಜನ್ ರೈ, ಡಾ. ಆಶಿತ್, ಕುಶಾಲಪ್ಪ, ಡಾ.ಗೋವಿಂದ ಪ್ರಸಾದ ಕಜೆ, ವಿಶ್ವನಾಥ ಕುಲಾಲ್ ಕರಾಯ, ಗುಣಕರ ಅಗ್ನಾಡಿ, ಜಯಾನಂದ ಕಲ್ಲಾಪು, ಚಂದ್ರಶೇಖರ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ಈ ಸಂದರ್ಭ ಕಿರಣ್ ಗೌಂಡತ್ತಿಗೆ, ಸಂದೇಶ್ ಕಜೆಕ್ಕಾರು, ಸಚಿನ್ ಗೌಂಡತ್ತಿಗೆ, ವಿಜಯ್ ಶಿಲ್ಪಿ ಕುಕ್ಕಾಜೆ ಹಾಗೂ ತುಷಾರ್ ಜೇಸಿಐಗೆ ಸೇರ್ಪಡೆಗೊಂಡರು.

ಉಪ್ಪಿನಂಗಡಿ ಘಟಕದ ನಿರ್ಗಮಿತ ಅಧ್ಯಕ್ಷ ಮೋಹನಚಂದ್ರ ತೋಟದಮನೆ ಸ್ವಾಗತಿಸಿದರು. ದಿವಾಕರ ಜೇಸಿ ವಾಣಿವಾಚಿಸಿದರು. ಸುರೇಶ್ ವಂದಿಸಿದರು.

LEAVE A REPLY

Please enter your comment!
Please enter your name here