ಪುಣ್ಚತ್ತಾರು ಬೀರ್ನೇಲ್ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಜೀರ್ಣೋದ್ದಾರ ಪ್ರಯುಕ್ತ ದೇವರ ಗದ್ದೆಯಲ್ಲಿ ಕೆಸರು ಗದ್ದೆ ಕ್ರೀಡಾಕೂಟ – ಸಮಿತಿ ರಚನೆ

0

ಅಧ್ಯಕ್ಷರಾಗಿ ಪದ್ಮಯ್ಯ ಗೌಡ ಅನಿಲ, ಪ್ರ. ಕಾರ್ಯದರ್ಶಿಯಾಗಿ ಸುಗುಣ ಬೀರ್ನೇಲ್

ಕಾಣಿಯೂರು: ಕಾರಣಿಕ ಕ್ಷೇತ್ರವಾದ ಪುಣ್ಚತ್ತಾರು ಬೀರ್ನೇಲ್ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಜೀರ್ಣೋದ್ದಾರದ ಪ್ರಯುಕ್ತ ಕ್ಷೇತ್ರದ ದೇವರ ಗದ್ದೆಯಲ್ಲಿ ಕೆಸರು ಗದ್ದೆ ಕ್ರೀಡಾಕೂಟವು ಜ 22ರಂದು ನಡೆಯಲಿದ್ದು. ಕ್ರೀಡಾಕೂಟ ಯಶಸ್ವಿಯಾಗಿ ನಡೆಸುವ ನಿಟ್ಟಿನಲ್ಲಿ ಸಮಿತಿ ರಚಿಸಲಾಯಿತು.

ಶ್ರೀ ಕ್ಷೇತ್ರದ ಮೊಕ್ತೇಸರರಾದ ಕೃಷ್ಣಪ್ಪ ಗೌಡ ಬೀರ್ನೆಲ್ ,ವಸಂತ ಗೌಡ ಬೀರ್ನೆಲ್ , ಪುರುಷೋತ್ತಮ ಗೌಡ 

ಬೀರ್ನೆಲ್ ಮತ್ತು ಕುಸುಮಾಧರ ಗೌಡ ಬೀರ್ನೆಲ್ ಅವರ ಉಪಸ್ಥಿತಿಯಲ್ಲಿ ಸಮಿತಿ ರಚಿಸಲಾಯಿತು.

ಅಧ್ಯಕ್ಷರಾಗಿ ಪದ್ಮಯ್ಯ ಗೌಡ ಅನಿಲ, ಪ್ರಧಾನ ಕಾರ್ಯದರ್ಶಿಯಾಗಿ ಸುಗುಣ ಬೀರ್ನೇಲ್ ಅವರನ್ನು ಆಯ್ಕೆ ಮಾಡಲಾಗಿದೆ. ಉಪಾಧ್ಯಕ್ಷರಾಗಿ ಹರೀಶ್ ಬೀರ್ನೆಲ್, ಜತೆ ಕಾರ್ಯದರ್ಶಿಯಾಗಿ ದೀಕ್ಷಿತ್ ಬೀರ್ನೆಲ್, ಕೋಶಾಧಿಕಾರಿಯಾಗಿ ಪ್ರವೀಣ್ ಬೀರ್ನೆಲ್, ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ದಿನೇಶ್ ಪೈಕ, ಸಹ ಕಾರ್ಯದರ್ಶಿಯಾಗಿ ಭವಿಷ್ ಕರಿಮಜಲು, ದೇವಿಪ್ರಸಾದ್ ಬೀರ್ನೆಲ್, ಸುಲಕ್ಷಣ್ ರೈ ಪೈಕ, ಪ್ರಧಾನ ಅರ್ಚಕರಾಗಿ ಚಿದಾನಂದ ಉಪಾಧ್ಯಾಯ ಹಾಗೂ 22ಮಂದಿ ಸದಸ್ಯರನ್ನು ಆಯ್ಕೆ ಮಾಡಲಾಗಿದೆ.
ರವಿಶಂಕರ್. ಎನ್. ಟಿ.ಪ್ರಾಸ್ತವಿಕ ಮಾತನಾಡಿದರು.

LEAVE A REPLY

Please enter your comment!
Please enter your name here