ವಿವೇಕಾನಂದ ಸಿ. ಬಿ. ಎಸ್. ಇ. ಶಾಲೆಯಲ್ಲಿ ಬಹುಮಾನ ವಿತರಣಾ ಕಾರ್ಯಕ್ರಮ

0

ಪುತ್ತೂರು: ನೆಹರು ನಗರದ ವಿವೇಕಾನಂದ ಸಿ. ಬಿ. ಎಸ್. ಇ. ಶಾಲೆಯಲ್ಲಿ ವಾರ್ಷಿಕೋತ್ಸವದ ಅಂಗವಾಗಿ ಇದೇ ಡಿ.15 ರಂದು, ವಿವಿಧ ಸಾಂಸ್ಕೃತಿಕ ಹಾಗೂ ಆಟೋಟ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಕಾರ್ಯಕ್ರಮವನ್ನು ತರಗತಿವಾರು ವಿಂಗಡಿಸಿ, ಆಯಾ ತರಗತಿಯ ಪೋಷಕ ಪ್ರತಿನಿಧಿಗಳಾದ ನಿವೇದಿತ ಪೈ, ಪದ್ಮಪ್ರಿಯ, ಸವಿತಾ, ಡಾ.ರಾಮಚಂದ್ರ, ನಂದಿನಿ, ಉಮೇಶ್ ಹಾಗೂ ವೈಶಾಲಿ ಇವರು ಅತಿಥಿಗಳಾಗಿ ಆಗಮಿಸಿ ಬಹುಮಾನಗಳನ್ನು ವಿತರಿಸಿದರು.

ಕಾರ್ಯಕ್ರಮದಲ್ಲಿ ರಕ್ಷಕ- ಶಿಕ್ಷಕ ಸಂಘದ ಅಧ್ಯಕ್ಷರಾದ ಡಾ.ದೀಪಕ್ ಅವರು ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯಿನಿ  ಸಿಂಧೂ ವಿ. ಜಿ. ಯವರ ಮಾರ್ಗದರ್ಶನದಲ್ಲಿ ಆಯಾ ವಿಭಾಗದ ಸಂಯೋಜಕರಾದ ವಿಶಾಲಾಕ್ಷಿ, ರುಚಿತಕೃಷ್ಣ, ಆಶಾ ಶೆಟ್ಟಿ ಹಾಗೂ
ವಿನಯಾ ಪ್ರಭು ಅವರು ಕಾರ್ಯಕ್ರಮವನ್ನು ಸಂಪನ್ನಗೊಳಿಸಿದರು.

LEAVE A REPLY

Please enter your comment!
Please enter your name here