ಪುತ್ತೂರು ಮುಖ್ಯರಸ್ತೆ ಬಳಿಯಿದ್ದ ಪೊಪ್ಯುಲರ್ ಕಬ್ಬಿನ ಹಾಲಿನ ಅಂಗಡಿ ಮಾಲಕ ಗಣೇಶ್ ಶೆಣೈ ನಿಧನ

0

ಪುತ್ತೂರು: ಪುತ್ತೂರು ಮುಖ್ಯರಸ್ತೆ ಅರುಣಾ ಚಿತ್ರಮಂದಿರದ ಬಳಿ ಈ ಹಿಂದಿದ್ದ ಪೊಪ್ಯುಲರ್ ಕಬ್ಬಿನ ಹಾಲಿನ ಅಂಗಡಿ ಮಾಲಕ ಗಣೇಶ್ ಶೆಣೈ(೪೭ವ)ರವರು ಡಿ.೨೫ರ ನಸುಕಿನ ಜಾವ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ನೆಲ್ಲಿಕಟ್ಟೆ ನಿವಾಸಿಯಾಗಿರುವ ಗಣೇಶ್ ಶೆಣೈ ಅವರು ಅವಿವಾಹಿತರಾಗಿದ್ದು ಪುತ್ತೂರು ಮುಖ್ಯರಸ್ತೆ ಅರುಣಾ ಚಿತ್ರ ಮಂದಿರದ ಬಳಿ ಪೊಪ್ಯುಲರ್ ಕಬ್ಬಿನ ಹಾಲಿನ ಅಂಗಡಿನ ನಡೆಸುತ್ತಿದ್ದು ಕ್ರಮೇಣ ಕಬ್ಬಿನ ಹಾಲಿನ ಅಂಗಡಿಯನ್ನು ಬಿಟ್ಟು ಲ್ಯಾಂಡ್‌ಲಿಂಕ್ ವ್ಯವಹಾರ ನಡೆಸುತ್ತಿದ್ದರು. ಡಿ.೨೫ರ ನಸುಕಿನ ಜಾವ ಅವರಿಗೆ ಎದೆ ನೋವು ಕಾಣಿಸಿಕೊಂಡು ಮೃತಪಟ್ಟಿದ್ದಾರೆ. ಮೃತರು ತಾಯಿ, ಮೂವರು ಸಹೋದರಿಯರನ್ನು ಅಗಲಿದ್ದಾರೆ.

ಗಣೇಶ್ ಶೆಣೈ ಅವರ ತಾಯಿ ಮತ್ತು ಸಹೋದರಿಯರು ಮಂಗಳೂರಿಗೆ ತೆರಳಿದ್ದು ಕಳೆದ ರಾತ್ರಿ ಗಣೇಶ ಒಬ್ಬರೇ ಮನೆಯಲಿದ್ದರು, ಬೆಳಿಗ್ಗೆ ಪೋನ್ ಕರೆಯನ್ನು ಸ್ವೀಕರಿಸದ ಹಿನ್ನೆಲೆಯಲ್ಲಿಬಂದು ನೋಡಿದಾಗ ಅವರು ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.

LEAVE A REPLY

Please enter your comment!
Please enter your name here