ಸುಳ್ಯಪದವು ಶ್ರೀ ಅಯ್ಯಪ್ಪ ಭಜನಾ ಮಂದಿರಕ್ಕೆ ಚಿನ್ನದ ರುದ್ರಾಕ್ಷಿ ಮಾಲೆ, ಬೆಳ್ಳಿಯ ನೀಲಾಂಜನ, ಕವಳಿಗೆ ಸೌಟ್ ಸಮರ್ಪಣೆ

0

ಪುತ್ತೂರು: ಸುಳ್ಯಪದವು ಶ್ರೀ ಅಯ್ಯಪ್ಪ ಭಜನಾ ಮಂದಿರದ ಪುನರ್ ಪ್ರತಿಷ್ಠಾ ಮಹೋತ್ಸವದ ಸಲುವಾಗಿ ಇಂದಾಜೆ ಕುಟುಂಬದ ಸದಸ್ಯರಿಂದ ಚಿನ್ನದ ರುದ್ರಾಕ್ಷಿ ಮಾಲೆ, ಬೆಳ್ಳಿಯ ನೀಲಾಂಜ, ಕವಳಿಗೆ ಸೌಟ್ ಸಹಿತ ವಿವಿಧ ಸೇವೆಗಳನ್ನು ಶ್ರೀ ಅಯ್ಯಪ್ಪ ದೇವರಿಗೆ ಸಮರ್ಪಣೆ ಮಾಡಲಾಯಿತು.


ದಿ| ಯಸ್ ದಯಾನಂದ ನಾಯಕ್ ಇಂದಾಜೆ ಸ್ಮರಣಾರ್ಥ ಪತ್ನಿ ಯಸ್ ಜಯಲಕ್ಷ್ಮೀ ಡಿ ನಾಯಕ್ ಮತ್ತು ಮಕ್ಕಳಾದ ಸೀಮಾ ಜಗದೀಶ್ ಪ್ರಭು, ಗೀತಾ ಶೇಷಗಿರಿ ಶೆಣೈ, ಸವಿತಾ ನಾಗೇಶ್ ಪ್ರಭು ಹಾಗು ಲಕ್ಷ್ಮೀನರಸಿಂಹ ನಾಯಕ್ ಅವರು ಶ್ರೀ ಅಯ್ಯಪ್ಪ ಸ್ವಾಮಿಗೆ ಚಿನ್ನದ ರುದ್ರಾಕ್ಷಿ ಮಾಲೆಯನ್ನು, ದಿ.ಯಸ್ ನಿತ್ಯಾನಂದ ನಾಯಕ್ ಇಂದಾಜೆ ಅವರ ಸ್ಮರಣಾರ್ಥ ಬೆಳ್ಳಿಯ ನೀಲಾಂಜನ ಆರತಿ ಹಾಗು ಬೆಳ್ಳಿಯ ಕವಳಿಗೆ ಸೌಟ್ ಅನ್ನು ಯಸ್ ಜಯಲಕ್ಷ್ಮೀ ದಯಾನಂದ ನಾಯಕ್ ಅವರು ಶ್ರೀ ಅಯಪ್ಪ ಸ್ವಾಮಿಗೆ ಸಮರ್ಪಣೆ ಮಾಡಿದರು. ದಿ ಯಸ್ ಮೋಹನ್‌ದಾಸ್ ನಾಯಕ್ ಇಂದಾಜೆ ಅವರ ಸ್ಮರಣಾರ್ಥ ಭಕ್ತರಿಗೆ ಪಾನಕ ಮತ್ತು ಬೆಲ್ಲ ವಿತರಣೆ ಮಾಡಲಾಯಿತು.

LEAVE A REPLY

Please enter your comment!
Please enter your name here