ಕೋಟಿ ಚೆನ್ನಯ ಜೋಡುಕರೆ ಕಂಬಳ ಸಮಿತಿ ಸಭೆ

0

ಪುತ್ತೂರು: ಜ.28,29ರಂದು ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಾಲಯದ ದೇವರಮಾರು ಗದ್ದೆಯಲ್ಲಿ ನಡೆಯುವ ಇತಿಹಾಸ ಪ್ರಸಿದ್ಧ 30ನೇ ವರ್ಷದ ಕೋಟಿ ಚೆನ್ನಯ ಜೋಡುಕರೆ ಕಂಬಳದ ಪೂರ್ವಭಾವಿ ಸಭೆಯು ಅಧ್ಯಕ್ಷ ಚಂದ್ರಹಾಸ ಶೆಟ್ಟಿ ಅಧ್ಯಕ್ಷತೆಯಲ್ಲಿ ದರ್ಬೆಯಲ್ಲಿ ನಡೆಯಿತು.


ಚಂದ್ರಹಾಸ ಶೆಟ್ಟಿ ಮಾತನಾಡಿ ಕೋಟಿ ಚೆನ್ನಯ ಜೋಡುಕರೆ ಕಂಬಳದ ಕರೆಯ ಕೆಲಸ ಆದಷ್ಟು ಶೀಘ್ರ ನಡೆಸಿ ಪ್ರಾಯೋಗಿಕ ಕಂಬಳಕ್ಕೆ ಅವಕಾಶ ನಡೆಸಿಕೊಡಬೇಕು ಎಂದು ಮನವಿ ಮಾಡಿದರು. ವಿವಿಧ ಸದಸ್ಯರಿಗೆ ವಹಿಸಿಕೊಟ್ಟ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನೆರೇರಿಸಲು ಸೂಚಿಸಿದರು.

ಪ್ರಧಾನ ಕಾರ್ಯದರ್ಶಿ ದಿನೇಶ್ ಪಿ.ವಿ. ಮಾತನಾಡಿ ಶೀಘ್ರದಲ್ಲಿ ಆಮಂತ್ರಣ ಪತ್ರಿಕೆ ಮುದ್ರಣಗೊಂಡಲ್ಲಿ ಸ್ಮರಣಸಂಚಿಕೆಗೆ ಸಹಕಾರಿಯಾಗಲಿದೆ ಎಂದರು.

ಕಂಬಳ ಸಮಿತಿ ವಿವಿಧ ಪದಾಧಿಕಾರಿಗಳಾದ ಖಜಾಂಜಿ ಪಂಜಿಗುಡ್ಡೆ ಈಶ್ವರಭಟ್, ಕುಂಬ್ರ ದುರ್ಗಾಪ್ರಸಾದ್ ರೈ, ಸುದರ್ಶನ್ ನಾಕ್ ಕಂಪ, ಜೋಕಿಂ ಡಿಸೋಜ, ಶಶಿಕಿರಣ್ ರೈ ನೂಜಿಬೈಲು, ಜತೆಕಾರ್ಯದರ್ಶಿ ಪ್ರೇಮಾನಂದ ನಾಕ್,ರವರು ಮಾತನಾಡಿ ಸಲಹೆ ಸೂಚನೆ ನೀಡಿದರು. ಖಾದರ್ ಪೋಳ್ಯ, ವಿಲ್ಫ್ರೆಡ್ ಫೆರ್ನಾಂಡಿಸ್, ಪ್ರಶಾಂತ್ ಮುರ, ಜಿನ್ನಪ್ಪ ಪೂಜಾರಿ ಮುರ, ಸತೀಶ್ ನಾಕ್ ಸುಳ್ಯ, ರೋಶನ್ ರೈ ಬನ್ನೂರು, ನವೀನ್ ನಾಕ್ ಬೆದ್ರಾಳ, ಸುದೇಶ್ ಕುಮಾರ್ ಚಿಕ್ಕಪುತ್ತೂರು, ಪ್ರಣಾಮ್ ಶೆಟ್ಟಿ ಕೈಕಾರ, ಚಂದ್ರಹಾಸ ಶೆಟ್ಟಿ ಬನ್ನೂರು, ಸಂತೋಷ್ ಭಂಡಾರಿ ಚಿಲ್ಮೆತ್ತಾರು, ಸುಧೀರ್ ಗೌಡ ತೆಂಕಿಲ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here