ಬನ್ನೂರು ರೈತರ ಸೇವಾ ಸಹಕಾರಿ ಸಂಘದ ಮಾಸಿಕ ಸಭೆ

0

ಅಡಿಕೆಗೆ ಹಳದಿ ರೋಗ, ಎಲೆಚುಕ್ಕಿರೋಗ ಸಮಸ್ಯೆ ಪರಿಹಾರಕ್ಕೆ ಶೀಘ್ರದಲ್ಲಿ ತಜ್ಞರೊಂದಿಗೆ ಕಾರ್ಯಾಗಾರ ನಡೆಸಲು ತೀರ್ಮಾನ

ಪುತ್ತೂರು: ಬನ್ನೂರು ರೈತರ ಸೇವಾ ಸಹಕಾರಿ ಸಂಘದ ಮಾಸಿಕ ಸಭೆಯು ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್‌ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಆಸುಪಾಸಿನಲ್ಲಿ ಅಡಕೆಗೆ ಹಳದಿ ಮತ್ತು ಎಲೆಚುಕ್ಕಿರೋಗ ಭಾಧಿಸಿದ್ದು ಅಡಿಕೆ ಬೆಳೆಗಾರರು ಕಂಗಲಾಗಿದ್ದಾರೆ.

ಈ ಬಗ್ಗೆ ಇಲಾಖಾ ತಜ್ಞರೊಂದಿಗೆ ಸಮಾಲೋಚನೆ ನಡೆಸಿ ಕಾರ್ಯಾಗಾರ ನಡೆಸಿ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಸಭೆಯಲ್ಲಿ ನಿರ್ಧರಿಸಲಾಯಿತು. ಮುಖ್ಯಕಾರ್ಯನಿರ್ವಹಣಾಧಿಕಾರಿ ಗೋಪಾಲಕೃಷ್ಣ ಭಟ್ ಸ್ವಾಗತಿಸಿ, ವ್ಯವಸ್ಥಾಪಕಿ ರಾಧಾ ಬಿ. ವಂದಿಸಿದರು. ಉಪಾಧ್ಯಕ್ಷ ರಾಜಶೇಖರ ಜೈನ್, ನಿರ್ದೇಶಕರಾದ ಅಶ್ರಪ್ ಕಲ್ಲೇಗ, ದೇವಾನಂದ, ಹಣಿಯೂರು ಸುಬ್ರಹ್ಮಣ್ಯ ಗೌಡ, ಮೋಹನ ಪಕ್ಕಳ, ನವೀನ್, ಸುಂದರ ಪೂಜಾರಿ ಬಡಾವು ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here