ಜ.22 ಕ್ಕೆ ಭೈರವೈಕ್ಯ ಡಾ| ಶ್ರೀ ಬಾಲಗಂಗಾಧರನಾಥ ಶ್ರೀಗಳ ಜಯಂತ್ಯೋತ್ಸವ ಹಿನ್ನಲೆ – ಗೌಡ ಸಮುದಾಯ ಭವನದಲ್ಲಿ ತುರ್ತು ಸಭೆ

0

ಪುತ್ತೂರು: ಜ.೨೨ ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಗದ್ದೆಯಲ್ಲಿ ಭೈರವೈಕ್ಯ ಡಾ| ಶ್ರೀ ಬಾಲಗಂಗಾಧರನಾಥ ಶ್ರೀಗಳ ಜಯಂತ್ಯೋತ್ಸವದ ಪೂರ್ವ ಸಿದ್ದತೆಗೆ ತುರ್ತು ಸಭೆಯ ಜ.2 ರಂದು ಶಾಸಕ ಸಂಜೀವ ಮಠಂದೂರು ಅವರ ನೇತೃತ್ವದಲ್ಲಿ ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ನಡೆಯಿತು.


ಒಕ್ಕಲಿಗ ಗೌಡ ಸಂಘದ ಅಧ್ಯಕ್ಷ ವಿಶ್ವನಾಥ ಗೌಡ ಕೆಯ್ಯೂರು, ಜಂಯತ್ಯೋತ್ಸವ ಸಮಿತಿ ಸಂಚಾಲಕ ದಿನೇಶ್ ಮೆದು, ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚಿದಾನಂದ ಬೈಲಾಡಿ, ಯುವ ಗೌಡ ಸೇವಾ ಸಂಘದ ಅಧ್ಯಕ್ಷ ನಾಗೇಶ್ ಕೆಡೆಂಜಿ, ಸೀತಾರಾಮ ಪೆರಿಯತ್ತೋಡಿ, ಪ್ರವೀಣ್ ಕುಂಟ್ಯಾನ, ರಾಧಾಕೃಷ್ಣ ಗೌಡ, ಪುರುಷೋತ್ತಮ ಮುಂಗ್ಲಿಮನೆ, ಗಣೇಶ್ ನೈತ್ತಾಡಿ, ಶ್ರೀಧರ್ ಗೌಡ ಕಣಜಾಲು,ಎ ವಿ ನಾರಾಯಣ್,  ದಯಾನಂದ ಸಹಿತ ಪ್ರಮುಖರು ಭಾಗವಹಿಸಿದರು.

LEAVE A REPLY

Please enter your comment!
Please enter your name here